Friday, September 18, 2026

BDA Apartments

ಮೈಸೂರು ಸಮತಾ ಅಧ್ಯಯನ ಕೇಂದ್ರದಿಂದ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ ಆಯ...
Home Front Page ಮೈಸೂರು ಸಮತಾ ಅಧ್ಯಯನ ಕೇಂದ್ರದಿಂದ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ ಆಯೋಜನೆ.

ಮೈಸೂರು ಸಮತಾ ಅಧ್ಯಯನ ಕೇಂದ್ರದಿಂದ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ ಆಯೋಜನೆ.

ಮೈಸೂರು,ಜನವರಿ,31,2023(www.justkannada.in): ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ.ವಿಜಯಾ ದಬ್ಬೆ ಅವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ-2023 ಯನ್ನು ಆಯೋಜಿಸಿದೆ.

ಸ್ಪರ್ಧೆಯ ನಿಯಮಗಳು: ಮಹಿಳಾ ಕೇಂದ್ರಿತ ವಸ್ತು ವಿಷಯವನ್ನು ನಿಗದಿಪಡಿಸಲಾಗಿದೆ. ಕವನ ಸ್ಪರ್ಧೆ ಗೆ ಎರಡು ಕವನ. ಕಥಾ ಸ್ಪರ್ಧೆ ಗೆ ಒಂದು ಕಥೆ. ಈ ಮೊದಲು ಎಲ್ಲಿಯೂ ಪ್ರಸಾರ/ ಪ್ರಕಟ ಆಗಿರಬಾರದು. ಕಥೆಗೆ ಗರಿಷ್ಠ ಪದಮಿತಿ 2500 ಪದಗಳು. ವಯಸ್ಸಿನ ಗರಿಷ್ಠ ಮಿತಿ 26.

ಕಥೆ, ಕವನವನ್ನು ಹಾಳೆಯ ಒಂದು ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆದು ಅಥವಾ ನುಡಿ/ಬರಹ/ಯುನಿಕೋಡ್ ನಲ್ಲಿ  ಟೈಪ್ ಮಾಡಿರಬೇಕು. ಹೆಸರು ,ವಿಳಾಸ,ಫೋನ್ ಸಂಖ್ಯೆ ಮತ್ತು ಈ -ಮೇಲ್ ವಿವರವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು, ತಮ್ಮ ಕಾಲೇಜು/ ವಿಶ್ವವಿದ್ಯಾನಿಲಯದ ಮುಖ್ಯಸ್ಥರಿಂದ ದೃಢೀಕರಿಸಿ ಕಳುಹಿಸಬೇಕು. ಕೊನೆಯ ದಿನಾಂಕ: 28.02.2023.

ಬಹುಮಾನ ಮೊತ್ತ:

ಪ್ರಥಮ ರೂ. 5 ಸಾವಿರ , ದ್ವಿತೀಯ  ರೂ. 3 ಸಾವಿರ, ತೃತೀಯ 2 ಸಾವಿರ ರೂ. ಮತ್ತು ತೀರ್ಪುಗಾರರು ಮೆಚ್ಚಿದ ಹತ್ತು ಕತೆಗಳಿಗೆ ತಲಾ 1 ಸಾವಿರ ರೂ.ಗಳ ಪ್ರೋತ್ಸಾಹಕರ ಬಹುಮಾನ ನೀಡಲಾಗುವುದು. ಅಲ್ಲದೆ, ವಿಜೇತರು ಮತ್ತು ಪ್ರೋತ್ಸಾಹಕರ ಬಹುಮಾನ ಪಡೆದವರಿಗೆ ಮೇ ತಿಂಗಳ ಕೊನೆಯ ವಾರದಲ್ಲಿ ಒಂದು ದಿನದ ಕಾವ್ಯ ಮತ್ತು ಕಥಾ ಕಮ್ಮಟ ನಡೆಸಲಾಗುವುದು.

ಕವನ/ಕಥೆ ಕಳಿಸಬೇಕಾದ ವಿಳಾಸ:

ವಿಜಯಾ ರಾವ್,

ಮನೆ ನಂಬರ್ 861, 14ನೇ ಮೇನ್, ವಿಜಯನಗರ ಮೊದಲನೆ ಹಂತ, ಮೈಸೂರು. ಪಿನ್: 570017.ಈ -ಮೇಲ್: samathaadhyayanakendra2023@gmail.com

Key words: State- Level -Poetry – Story -Competition- Mysore- Samata- Study -Centre.