Thursday, August 13, 2026

BDA Apartments

Home Front Page ಸೋನಿಯಾಗಾಂಧಿ ಭೇಟಿ ಬಗ್ಗೆ ನಿರ್ಧರಿಸಿಲ್ಲ: ಇಂದು ಮಧ್ಯಾಹ್ನದ ಬಳಿಕ ವಕೀಲರ ಭೇಟಿ ಚರ್ಚೆ- ಸಂಸದ ದಿ.ಕೆ...

ಸೋನಿಯಾಗಾಂಧಿ ಭೇಟಿ ಬಗ್ಗೆ ನಿರ್ಧರಿಸಿಲ್ಲ: ಇಂದು ಮಧ್ಯಾಹ್ನದ ಬಳಿಕ ವಕೀಲರ ಭೇಟಿ ಚರ್ಚೆ- ಸಂಸದ ದಿ.ಕೆ ಸುರೇಶ್ ಹೇಳಿಕೆ..

ನವದೆಹಲಿ,ಅ,24,2019(www.justkannada.in):  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ನಿನ್ನೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ನಡುವೆ ಇಂದು ಮಧ್ಯಾಹ್ನ ವಕೀಲರನ್ನ ಭೇಟಿಯಾಗಿ ಮುಂದಿನ ನಡೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಮಾತನಾಡಿದ ಸಂಸದ ಡಿ.ಕೆ ಸುರೇಶ್, ಡಿ.ಕೆ ಶಿವಕುಮಾರ್  ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಸೋನಿಯಾ ಗಾಂಧಿ ಭೇಟಿ ಬಗ್ಗೆ ನಿರ್ಧಾರ ಮಾಡಿಲ್ಲ. ಹಾಗೆಯೇ ಬೇರೆ ಯಾವುದೇ ಕಾರ್ಯಕ್ರಮಗಳ ಬಗ್ಗೆಯೂ ನಿರ್ಧಾರ ಮಾಡಲಿಲ್ಲ. ಮಧ್ಯಾಹ್ನದ ಬಳಿಕ ನಮ್ಮ ವಕೀಲರನ್ನ ಭೇಟಿಯಾಗುತ್ತೇವೆ ಎಂದರು.

ಡಿಕೆಶಿ ತಾಯಿ ಗೌರಮ್ಮ ಮತ್ತು ಪತ್ನಿಗೆ ಸಮನ್ಸ್ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ನವದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆ ಇದ್ದು ಈ ಹಿನ್ನೆಲೆ ಹೈಕೋರ್ಟ್ ಗೆ ಡಿ.ಕೆ ಸುರೇಶ್ ತೆರಳಿದ್ದಾರೆ.

Key words: Sonia Gandhi-meet—discussion-Lawyer MP -DK Suresh ..