ಸಿದ್ಧರಾಮಯ್ಯ. ಪರಮೇಶ್ವರ್ ಗೆ ಟಾಂಗ್: ಸಿಎಂ ಬಗ್ಗೆ ಮಾತನಾಡುತ್ತಿರುವ ಸ್ವಪಕ್ಷದವರಿಗೆ ಎಚ್ಚರಿಕೆ ಕೊಟ್ಟ ಸಚಿವ ಕೆ.ಎಸ್ ಈಶ್ವರಪ್ಪ.

ಮೈಸೂರು,ಜುಲೈ,9,2021(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ, ಹಾಗೂ ‌ಪರಮೇಶ್ವರ್ ಇಬ್ಬರೂ ಯಾವುದಾದರೂ ದಲಿತರ ಬೀದಿಗೆ ಹೋಗಲಿ. ಸಿದ್ದರಾಮಯ್ಯ ಅವ್ರನ್ನ ಸೋಲಿಸಲು ನಾನು ಪ್ರಯತ್ನ ಮಾಡಿಲ್ಲ ಅಂತಾ ಪರಮೇಶ್ವರ್ ಹೇಳಲಿ. ಪರಮೇಶ್ವರ್ ಸೋಲಿಸಲು ನಾನು ಪ್ರಯತ್ನ ಮಾಡಿಲ್ಲ ಅಂತಾ ಸಿದ್ದರಾಮಯ್ಯ ಆಣೆ ಮಾಡಿ ಹೇಳಲಿ. ಹೀಗೆ ಮಾಡಿಕೊಂಡೆ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ,ಎಸ್ ಈಶ್ವರಪ್ಪ ಟಾಂಗ್ ನೀಡಿದರು.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೊಸೆ ಅಂತಾರೇ.. ಬಾದಾಮಿಯಲ್ಲಿ ನಿಂತು ಅಲ್ಲಿಯೂ ಸೊಸೆ ಅಂತಾರೇ. ಕೀಲಿ ಕೈ ನನ್ನ ಕೈಯಲ್ಲಿ ಇದೆ ಅಂತಾರೆ. ಹಾಗಿದ್ರೆ ನೀವು ಯಾವ ಪಕ್ಷಕ್ಕೆ ಮಗ ಹೇಳಿ. ನಾವು ಪಕ್ಷವನ್ನು ತಾಯಿ ಅಂದುಕೊಂಡಿದ್ದೇವೆ. ನಮ್ಮ ತಾಯಿಗೆ ಕಿಂಚಿತ್ ತೊಂದರೆ ಆದರೂ ನಾವು ವಿರೋಧಿಸಿ ನಿಲ್ತೀವಿ. ನೀವು ಯಾವ ಪಕ್ಷಕ್ಕೆ ಲಾಯಲ್ ಹೇಳಿ ಎಂದು ಸಿದ್ದರಾಮಯ್ಯ ಸೊಸೆ ಹೇಳಿಕೆಗೆ ಲೇವಡಿ ಮಾಡಿದರು.

ಮೂರು ಜನಕ್ಕೆ ಹೇಗೆ, ಯಾವಾಗ ಬುದ್ದಿ‌ಕಲಿಸಬೇಕು ಎಂಬುದು ಗೊತ್ತಿದೆ ಬುದ್ದಿ‌ ಕಲಿಸುತ್ತೇವೆ.

ಸಿಎಂ ಬಗ್ಗೆ ಮೂರ್ನಾಲ್ಕು ಜನರಷ್ಟೇ ಮಾತನಾಡುತ್ತಿದ್ದಾರೆ. ಅದನ್ನು ಬಿಟ್ಟು ಬೇರೆ ಯಾರು ಮಾತನಾಡುತ್ತಿಲ್ಲ. ಯತ್ನಾಳ್,ಯೋಗೇಶ್ವರ್,ರೇಣುಕಾಚಾರ್ಯ. ಮೂರು ಜನಕ್ಕೆ ಹೇಗೆ, ಯಾವಾಗ ಬುದ್ದಿ‌ಕಲಿಸಬೇಕು ಎಂಬುದು ಗೊತ್ತಿದೆ ಬುದ್ದಿ‌ ಕಲಿಸುತ್ತೇವೆ ಎಂದು  ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ನಮ್ಮ‌ ಪಕ್ಷದಲ್ಲಿ ಅಪ್ಪ‌ ಅಮ್ಮ ಇದ್ದಾರೆ. ಆದರೆ ಕಾಂಗ್ರೆಸ್ ‌ನಲ್ಲಿ ಈ ರೀತಿ ಇಲ್ಲ. ವಿಶ್ವನಾಥ್ ಮಾತನಾಡುತ್ತಿರುವುದು ಸಿದ್ದರಾಮಯ್ಯ ಚಾಹೆಯಿಂದ. ಸ್ವಪಕ್ಷಕ್ಕೆ ಸಿದ್ದರಾಮಯ್ಯ ರೆ ವಿಲನ್. ಪಕ್ಷದೊಳಗೆ ಇದ್ದುಕೊಂಡು ಸಿದ್ದರಾಮಯ್ಯ ಆಟ ಆಡುತ್ತಿದ್ದಾರೆ. ಇದೆ ಚಾಹೆ ವಿಶ್ವನಾಥ್ ರಲ್ಲು ಉಳಿದುಕೊಂಡಿದೆ. ಬಿಜೆಪಿಯನ್ನ ಶಿಸ್ತಿನ ಪಕ್ಷ ಅಂದ್ರು ವಿಶ್ವನಾಥ್ ಮಾತನಾಡುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ  ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಸಂಪುಟದಲ್ಲಿ ಹಿಂದುಳಿದ, ದಲಿತ ವರ್ಗದವರಿಗೆ ಅವಕಾಶ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರಾಮೀಣಾಭಿವೃದ್ಧಿ,‌ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅಭಿನಂದನೆ ಸಲ್ಲಿಸಿದರು.

ಕಾಂಗ್ರೆಸ್ ನಲ್ಲಿ ಐದು ಜಾತಿಗೆ ಐದು ಜನ ಸ್ವಯಂ ಘೋಷಿತ  ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇನ್ನೂ ಚುನಾವಣೆಯೇ ನಡೆದಿಲ್ಲ ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಘೋಷಣೆ ಮಾಡ್ಕೊಂಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೂ ಕಾಂಗ್ರೆಸ್ ಬರೋದಿಲ್ಲ. ಮುಖ್ಯಮಂತ್ರಿ ಪದವಿ ಅನ್ನೋದು ಕನಸ್ಸು. 17 ಜನರನ್ನ ಯಾವುದೇ ಕಾರಣಕ್ಕೂ ವಾಪಸ್ ಕರೆದುಕೊಳ್ಳೊದಿಲ್ಲ ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಅರ್ಜಿ ಹಾಕಿ ಪಕ್ಷಕ್ಕೆ ಬರಲಿ ಅಂತಾ ಡಿಕೆ ಶಿವಕುಮಾರ್ ಹೆಳ್ತಾರೆ. ಮುಳುಗುತ್ತಿರೋ ಹಡಗು ಕಾಂಗ್ರೆಸ್ ಪಕ್ಷ. ಬಂದಿರೋ 17 ಮಂದಿ ಆ ಕಡೆ ಮೂಸಿಯೂ ನೋಡಿಲ್ಲ ಅವರು. ಯಾರಾದರೂ ಮತ್ತೆ ಆ ಪಕ್ಷಕ್ಕೆ ಹೊಗ್ತಾರ…? ಎಂದು ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದರು.

ಕಾಂಗ್ರೆಸ್ ನಲ್ಲಿ ಏಕತೆ ಇಲ್ಲ. ಡಿ.ಕೆ.ಶಿವಕುಮಾರ್ ಅವ್ರ ಪ್ರಚಾರ ವಾಹನದಲ್ಲಿ ಸಿದ್ದರಾಮಯ್ಯ ಅವ್ರ ಪೋಟೋ ಕಿತ್ತು ಬಿಸಕಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು.

Key words: Siddaramaiah- Parameshwar-Minister- KS Eshwarappa-mysore