ಮೈಸೂರಿನ ವಿಜಯವಾಣಿ ಬಳಗದಿಂದ ಹಿರಿಯ ಪತ್ರಕರ್ತ ಹರೀಶ್ ಬಂದಗದ್ದೆ ಅವರಿಗೆ ಆತ್ಮೀಯ ಬೀಳ್ಕೊಡುಗೆ

ನವದೆಹಲಿ, ಜೂನ್ 28, 2020 (www.justkannada.in): ಹಿರಿಯ ಪತ್ರಕರ್ತ, ವಿಜಯ ವಾಣಿಯ ಮುಖ್ಯ ಉಪ ಸಂಪಾದಕ ಎಸ್ ಹರೀಶ ಬಂದಗದ್ದೆ ಅವರಿಗೆ 60 ರ ಸಂಭ್ರಮ…

ನಾಲ್ಕು ದಶಕಗಿಗೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಹರೀಶ್ ಅವರಿಗೆ ವಿಜಯವಾಣಿ ಬಳಗದಿಂದ ‘ಹರೀಶ 60 ರ ಹರಷ’ ಕಾರ್ಯಕ್ರಮವನ್ನು ನಗರದ ರಾಜೇಂದ್ರ ಕಲಾಮಂದಿರದಲ್ಲಿ ಆಯೋಜಿಸಲಾಗಿತ್ತು.

ಮಾಜಿ ಸಚಿವ ವಿಶ್ವನಾಥ್, ಶಾಸಕ ಜಿ ಟಿ ದೇವೇಗೌಡ ಹಲವು ಗಣ್ಯರು ಪಾಲ್ಗೊಂಡು ನಿವೃತ್ತಿ ಜೀವನಕ್ಕೆ ಶುಭ ಕೋರಿದರು. ಹರಿಶ್ ಅವರಿನ ಒಡನಾಟವನ್ನು ಹಿರಿಯ ಪತ್ರಕರ್ತರು ನೆನಪಿಸಿಕೊಂಡರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.