Tuesday, August 4, 2026

BDA Apartments

Home Front Page ಸ್ವಪ್ರತಿಷ್ಠೆಗೆ, ಸ್ವಾರ್ಥಕ್ಕೆ ಮುಂದೆಯಾದರೂ ಇಂಥ ನಿರ್ಧಾರ ತೆಗೆದುಕೊಳ್ಳಬಾರದು : ಡಿಸಿಎಂ ಗೋವಿಂದ ಕಾರಜೋಳ ಮನವಿ 

ಸ್ವಪ್ರತಿಷ್ಠೆಗೆ, ಸ್ವಾರ್ಥಕ್ಕೆ ಮುಂದೆಯಾದರೂ ಇಂಥ ನಿರ್ಧಾರ ತೆಗೆದುಕೊಳ್ಳಬಾರದು : ಡಿಸಿಎಂ ಗೋವಿಂದ ಕಾರಜೋಳ ಮನವಿ 

ಬೆಂಗಳೂರು,ಡಿಸೆಂಬರ್,14,2020(www.justkannada.in) : ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರ ಪರ ಹೋರಾಟ ಮಾತ್ರ ಮಾಡಲಿ, ಅವರು ರೈತ ಹೋರಾಟಗಾರರಾಗಿಯೇ ಇರಬೇಕು. ಅವರು ಸ್ವಪ್ರತಿಷ್ಠೆಗೆ, ಸ್ವಾರ್ಥಕ್ಕೆ ಮುಂದೆಯಾದರೂ ಇಂಥ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಡಿಸಿಎಂ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.

logo-justkannada-mysore

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಸಾರಿಗೆ ಮುಷ್ಕರ ಹಿಂಪಡೆಯಲು ಅಲೋಚನೆ ಮಾಡುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಅವರಿಗೆ ತಡವಾಗಿಯಾದರೂ ಜ್ಞಾನೋದಯ ಆಯ್ತಲ್ಲ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ.

ಸಾರಿಗೆ ಮುಷ್ಕರದಿಂದ ಸಾರ್ವಜನಿಕರಿಗೂ ತೊಂದರೆ ಆಯ್ತು, ನೌಕರರಿಗೂ ತೊಂದರೆಯಾಯ್ತು, ಹೋರಾಟಗಾರ ಇಂತಹ ಹೋರಾಟಕ್ಕೆ ಇಳಿಯುವ ಮುನ್ನ ಸಾಧಕ ಬಾಧಕಗಳನ್ನು ಯೋಚಿಸಬೇಕು ಎಂದು ಮನವಿ ಮಾಡಿದ್ದಾರೆ.

selfishness-selfishness-Such-decision-Do-not-take-DCM-Govinda Karajola 

key words : selfishness-selfishness-Such-decision-Do-not-take-DCM-Govinda Karajola