ಆರ್.ಆರ್ ನಗರದಲ್ಲಿ ನಾನೇ ಅಭ್ಯರ್ಥಿ: ಇಲ್ಲಿ ಯಾವ ಬಂಡೆ ಆಟನೂ ನಡೆಯಲ್ಲ-ಡಿಕೆಶಿಗೆ ಸಚಿವ ಆರ್.ಅಶೋಕ್ ಟಾಂಗ್…

ಬೆಂಗಳೂರು,ಅಕ್ಟೋಬರ್,14,2020(www.justkannada.in):  ಆರ್.ಆರ್ ನಗರದಲ್ಲಿ ನಾನೇ ಅಭ್ಯರ್ಥಿ. ಇಲ್ಲಿ ಯಾವ ಬಂಡೆ ಆಟನೂ ನಡೆಯಲ್ಲ. ಅವರ ಆಟ ಏನಿದ್ದರೂ ಕನಕಪುರದಲ್ಲಿ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.jk-logo-justkannada-logo

ಜಿದ್ದಾಜಿದ್ಧಿನ ಕಣವಾಗಿ ಮಾರ್ಪಟ್ಟಿರುವ ಆರ್.ಆರ್ ನಗರ ಉಪಚುನಾವಣಾ ಕಣದಲ್ಲಿ ಈಗಾಗಲೇ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಚಿವ ಆರ್ ಅಶೋಕ್, ಆರ್.ಆರ್ ನಗರದಲ್ಲಿ ನಾನೇ ಅಭ್ಯರ್ಥಿ.ಇಲ್ಲಿ ಯಾವ ಬಂಡೆ ಕಲ್ಲು ಇಲ್ಲ. ಬಂಡೆ ಕಲ್ಲು ಏನೇ ಇದ್ದರೂ ಅದು ಕನಕಪುರದಲ್ಲಿ ಮಾತ್ರ . ಇಲ್ಲಿ ಅವರ ಆಟ ನಡೆಯಲ್ಲ ಎಂದು ಕುಟುಕಿದರು.rr-nagar-by-election-candidate-minister-r-ashok-tong-kpcc-president-dk-sivakumar

ಡಿ.ಕೆ ಶಿವಕುಮಾರ್ ನಮ್ಮನ್ನ ನೋಡಿ ಮತ ಹಾಕಿ ಎನ್ನುತ್ತಾರೆ. ಆದರೆ ಮುನಿರತ್ನ ಅವರ ಕೆಲಸವನ್ನ ನೋಡಿ. ಆರ್.ಆರ್ ನಗರ ಅಭಿವೃದ್ಧಿಯಾಗಿದೆ. ಹೀಗಾಗಿ ಮುನಿರತ್ನ ಗೆಲ್ಲಿಸಿ ಎಂದು ಆರ್.ಅಶೋಕ್ ಹೇಳಿದರು.

Key words: RR Nagar- by election- candidate  minister- R. Ashok -Tong –kpcc president-DK Sivakumar.