ಲಾಕ್ ಡೌನ್ ವದಂತಿಗೆ ತೆರೆ ಎಳೆದ ಕಂದಾಯ ಸಚಿವ ಆರ್.ಅಶೋಕ್..

ಬೆಂಗಳೂರು,ಜೂ,25,2020(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹರುಡುತ್ತಿರುವ ಹಿನ್ನೆಲೆ  ಮತ್ತೆ ಲಾಕ್ ಡೌನ್ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹರಡಿದ್ದ ವದಂತಿಗೆ ಕಂದಾಯ ಸಚಿವ ಆರ್.ಅಶೋಕ್ ತೆರೆ ಎಳೆದಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್, ಯಾವುದೇ ಕಾರಣಕ್ಕೂ ಮತ್ತೆ ಲಾಕ್ ಡೌನ್ ಮಾಡಲ್ಲ. ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣದಲ್ಲಿ ಇರುವ ಕಾರಣ, ಲಾಕ್ ಡೌನ್ ಮಾಡುವುದಿಲ್ಲ. ನೋ ಲಾಕ್ ಡೌನ್ ಇನ್ ಬೆಂಗಳೂರು ಇದು ಕ್ಲಿಯರ್ ಎಂದು ಸ್ಪಷ್ಟನೆ ನೀಡಿದರು.

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿವೆ.  ಕೊರೋನಾ ಜತೆ ಬದುಕುವುದು ಅನಿವಾರ್ಯವಾಗಿದೆ. ಬೆಂಗಳೂರು ಸೇಫ್ ಝೋನ್ ನಲ್ಲಿದೆ. ಹೀಗಾಗಿ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ನಾಳೆ ಸರ್ವ ಪಕ್ಷ ಸಭೆ ನಡೆಯಲಿದೆ. ಈ ಸಭೆಯ ನಂತ್ರ ಯಾವ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.Revenue Minister- R. Ashok –lockdown-bangalore

ಸೋಂಕಿತರು ಯಾವುದೇ ಕಾರಣಕ್ಕೂ ಕಾಯಬಾರದು. ರಸ್ತೆಯಲ್ಲಿ ನಿಲ್ಲಬಾರದು. 6ರಿಂದ 8 ಗಮಟೆಯೊಳಗೆ ಸೋಂಕಿತರನ್ನ ಆಸ್ಪತ್ರೆಗೆ ರವಾನಿಸುತ್ತೇವೆ. ಬೆಂಗಳೂರಿನಲ್ಲಿ 100 ಆಂಬ್ಯುಲೆನ್ಸ್  ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

Key words: Revenue Minister- R. Ashok –lockdown-bangalore