Monday, August 10, 2026

BDA Apartments

Home Crime ರೇಣುಕಾಸ್ವಾಮಿ ಹತ್ಯೆ ಪ್ರಕರಣ:  ಪಾಟೀಸವಾಲಿಗೆ ಅನುಮತಿ ನೀಡಿದ ಕೋರ್ಟ್

ರೇಣುಕಾಸ್ವಾಮಿ ಹತ್ಯೆ ಪ್ರಕರಣ:  ಪಾಟೀಸವಾಲಿಗೆ ಅನುಮತಿ ನೀಡಿದ ಕೋರ್ಟ್

ಬೆಂಗಳೂರು,ಆಗಸ್ಟ್,10,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ಸಾಕ್ಷಿಯ ಪಾಟೀ ಸವಾಲಿಗೆ ಆರೋಪಿಗಳಿಗೆ ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯ ಅನುಮತಿ ನೀಡಿದೆ.

ಮಾಫಿಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಪ್ರಕರಣ 14ನೇ ಆರೋಪಿ ಪ್ರದೋಷ್ 59ನೇ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ 14ನೇ ಸಾಕ್ಷಿಯ ಪಾಟೀ ಸವಾಲಿಗೆ ಆರೋಪಿಗಳಿಗೆ ಅನುಮತಿ ನೀಡಿದೆ. ಮಧ್ಯಾಹ್ನ 3 ಗಂಟೆಗೆ  ನ್ಯಾಯಾಲಯ ಆದೇಶ ನೀಡಲಿದ್ದುಇದೀಗ ಸಾಕ್ಷಿಯ ಪಾಟೀಸವಾಲು ಮುಂದುವರಿಕೆಯಾಗಲಿದೆ.

ಮಾಫಿಸಾಕ್ಷಿಯಾಗುವುದಾಗಿ  14ನೇ ಆರೋಪಿ ಪ್ರದೋಷ್ ಸಲ್ಲಿಸಿರುವ ಅರ್ಜಿಗೆ ಅಕ್ಷೇಪಣೆ ಸಲ್ಲಿಸಲು ಆರೋಪಿ ನಟ ದರ್ಶನ್ ಪರ ವಕೀಲರು ಅವಕಾಶ ಕೋರಿದ್ದಾರೆ.   ದರ್ಶನ್ ಸೇರಿ 6 ಆರೋಪಿಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಹಾಜರಾಗಿದ್ದಾರೆ.

Key words: Renukaswamy, murder case, Darshan,   Court, Patiswalu,