Tuesday, August 18, 2026

BDA Apartments

Home Front Page ಭಂಡತನ ಬಿಟ್ಟು ನಾಗೇಂದ್ರರನ್ನ ಸಂಪುಟದಿಂದ ಕೈಬಿಡಿ-ಬಿವೈ ವಿಜಯೇಂದ್ರ ಆಗ್ರಹ

ಭಂಡತನ ಬಿಟ್ಟು ನಾಗೇಂದ್ರರನ್ನ ಸಂಪುಟದಿಂದ ಕೈಬಿಡಿ-ಬಿವೈ ವಿಜಯೇಂದ್ರ ಆಗ್ರಹ

ಬೆಂಗಳೂರು,ಆಗಸ್ಟ್,18,2026 (www.justkannada.in):  ಸಚಿವ ಸಂಪುಟದಿಂದ ಸಚಿವ ಬಿ.ನಾಗೇಂದ್ರ ಅವರನ್ನು ಕೈಬಿಡುವಂತೆ ಬಿಜೆಪಿ  ಆಗ್ರಹಿಸುತ್ತಿದ್ದು ವಿಧಾನಮಂಡಲ ಅಧಿವೇಶನದಲ್ಲಿ ಪಟ್ಟು ಹಿಡಿದು ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ.  ಈ ಇಚ್ಛೆ ಸಿಎಂ ಡಿಕೆ ಶಿವಕುಮಾರ್ ಗೆ ಇದ್ದರೇ ತಕ್ಷಣ  ಬಿ.ನಾಗೇಂದ್ರರನ್ನು ಸಂಪುಟದಿಂದ ಕೈಬಿಡಬೇಕು. ಭಂಡತನ ಬಿಟ್ಟು ಸಂಫುಟದಿಂದ ನಾಗೇಂದ್ರರನ್ನು ಕೈಬಿಡಿ ಎಂದು ಆಗ್ರಹಿಸಿದರು.

ಅಧಿವೇಶನದಲ್ಲಿ ಬರ, ಕೆಪಿಎಸ್ ಸಿ ಸೇರಿ ಎಲ್ಲಾ ವಿಚಾರ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು  ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

Key words: Remove, Nagendra, from, cabinet, BY Vijayendra