ಫೆ.6 ರಂದು ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬಂದ್ ಮಾಡಿ ಹೋರಾಟ- ಬಡಗಲಪುರ ನಾಗೇಂದ್ರ..

ಮೈಸೂರು, ಫೆಬ್ರವರಿ,3,2021(www.justkannada.in): ಕೇಂದ್ರದ ಕೃಷಿಕಾಯ್ದೆ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದು ಈ ಮಧ್ಯೆ ಫೆಬ್ರವರಿ 6 ರಂದು ರಾಷ್ಟ್ರೀಯ , ರಾಜ್ಯ ಹೆದ್ಧಾರಿ ಬಂದ್  ಮಾಡಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಬಡಗಲಪುರ ನಾಗೇಂದ್ರ,  ಫೆಬ್ರವರಿ 6 ರಂದು ಮೂರು ಗಂಟೆಗಳ ಕಾಲ ರಸ್ತೆ ತಡೆದು ಹೋರಾಟ ಮಾಡುತ್ತೇವೆ. ಇದನ್ನ ದೆಹಲಿಯಲ್ಲಿ ಕಿಸಾನ್ ಸಂಘಟನೆ ಕರೆ ನೀಡಿದೆ. ಮಧ್ಯಾಹ್ನ 12 ರಿಂದ 3ರ ವರೆಗೆ ಈ ಹೋರಾಟ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

ನಮಗೆ ಈ ಹೋರಾಟಕ್ಕೆ ಯಾವುದೇ ಅನುಮತಿ ಇಲ್ಲ. ಆದರು ನಾವು ನಮ್ಮ ಹೋರಾಟ ಮಾಡುತ್ತೇವೆ. ಅವರಿಗೆ ಮಾಹಿತಿ ನೀಡಿ ನಮ್ಮ ಹೋರಾಟ ಮಾಡುತ್ತೇವೆ. ಆದರೆ ನಮ್ಮನ್ನ ಅವರು ಅರೆಸ್ಟ್ ಮಾಡಿದರು ಸರಿ. ನಾವು ಎಲ್ಲದಕ್ಕೂ ಸಿದ್ದವಾಗಿ ಹೋರಾಟ ಮಾಡುತ್ತೇವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.protest- National - State Highway-farmer leader- Badagalpura Nagendra-mysore

ಸರ್ಕಾರ ಹತಾಶೆಯ ಪ್ರತೀಕದಿಂದ ರೈತರ ಜೊತೆ ಹೀಗೆ ವರ್ತಿಸುತ್ತಿದೆ. ಇದು ಫ್ಯಾಸಿಸ್ಟ್ ಸರ್ಕಾರದ ನಡೆಯಂತಿದೆ. ಗಡಿ, ಭಾಷೆ, ರಾಜ್ಯ ಮೀರಿ ಈ ಪ್ರತಿಭಟನೆ ನಡೆಯುತ್ತಿದೆ. ಹತಾಶೆಯ ಫಲವನ್ನ ಶೀಘ್ರದಲ್ಲೇ ಈ ಸರ್ಕಾರ ಉಣ್ಣುತ್ತೆ ಎಂದು ರೈತ ಮುಖಂಡ‌ ಬಡಗಲಪುರ ನಾಗೇಂದ್ರ ಹೇಳಿದರು.

Key words: protest- National – State Highway-farmer leader- Badagalpura Nagendra-mysore