Sunday, August 9, 2026

BDA Apartments

Home Front Page ಶಕ್ತಿ ಯೋಜನೆಗೆ ವಿರೋಧಿಸಿ ಮೈಸೂರು ಆಟೋ ಚಾಲಕರಿಂದ ಪ್ರತಿಭಟನೆ.

ಶಕ್ತಿ ಯೋಜನೆಗೆ ವಿರೋಧಿಸಿ ಮೈಸೂರು ಆಟೋ ಚಾಲಕರಿಂದ ಪ್ರತಿಭಟನೆ.

ಮೈಸೂರು,ಜೂನ್,30,2023(www.justkannada.in): ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶದ ಶಕ್ತಿಯೋಜನೆಗೆ ವಿರೋಧಿಸಿ ಮೈಸೂರಿನಲ್ಲಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.

ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ಆಟೋ ಚಾಲಕರು ಧರಣಿ ಕೈಗೊಂಡಿದ್ದು ಸುಮಾರು 25 ಆಟೋಗಳಲ್ಲಿ ಬೆಂಗಳೂರಿಗೆ ತೆರಳಿ ಸಿಎಂ ಸಿದ್ಧರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಸಮಸ್ಯೆಯಾಗಿದೆ. ಸಮಸ್ಯೆ ಬಗೆಹರಿಸಲು ಸಮಿತಿ ರಚಿಸಿ. ಆಟೋ ಚಾಲಕರ ಸಮಸ್ಯೆ ಕುರಿತು ಚರ್ಚಿಸಿ  ಪರಿಹಾರ ನೀಡಿ. ಇಲ್ಲವಾದರೇ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾನಿರತ ಆಟೋಚಾಲಕರು ಎಚ್ಚರಿಕೆ ನೀಡಿದ್ದಾರೆ.

Key words:  Protest – Mysore -auto drivers- against -Shakti Yojana.