Saturday, September 5, 2026

BDA Apartments

Home Front Page ನೇಮಕಾತಿಗಳ ಆರಂಭಕ್ಕೆ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಹೋರಾಟ: ಪ್ರತಿಭಟನಾನಿರತರು ಪೊಲೀಸರ ವಶಕ್ಕೆ

ನೇಮಕಾತಿಗಳ ಆರಂಭಕ್ಕೆ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಹೋರಾಟ: ಪ್ರತಿಭಟನಾನಿರತರು ಪೊಲೀಸರ ವಶಕ್ಕೆ

ಧಾರವಾಡ,ಡಿಸೆಂಬರ್,1,2025 (www.justkannada.in): ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ ಸಹ ಕಳೆದ ಮೂರ್ನಾಲ್ಕು ವರ್ಷಗಳಿಂದ ಸರಿಯಾಗಿ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ ಹಾಗೂ ನೇಮಕಾತಿಯನ್ನ ಆರಂಭಿಸದ ಸರ್ಕಾರದ ವಿರುದ್ದ ಆಕ್ರೋಶ ಕಟ್ಟೆ ಹೊಡೆದಿದ್ದು, ಇಂದು ಬೃಹತ್ ಹೋರಾಟಕ್ಕೆ ಮುಂದಾಗಿದ್ದ ಉದ್ಯೋಗಾಕಾಂಕ್ಷಿಗಳನ್ನು ಪೊಲೀಸರು ವಶಕ್ಕೆ ಪಡೆದರು.

ಸರ್ಕಾರಿ ಹುದ್ದೆಗಳ ನೇಮಕಾತಿಯನ್ನ ಆರಂಭಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನ ಖಂಡಿಸಿ  ಇಂದು ಧಾರವಾಡದಲ್ಲಿ  ಜನಸಾಮಾನ್ಯರ ವೇದಿಕೆ ವತಿಯಿಂದ ಉದ್ಯೋಗಕಾಂಕ್ಷಿಗಳು ಬೃಹತ್  ಹೋರಾಟಕ್ಕೆ ಮುಂದಾಗಿದ್ದರು. ಆದರೆ ಈ ಹೋರಾಟಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ.

ನೇಮಕಾತಿ ಆರಂಭಿಸಿಲು ಸರ್ಕಾರದ ಮಾಡುತ್ತಿರುವ ವಿಳಂಬ ಧೋರಣೆ ಖಂಡಿಸಿ ಈಗಾಗಲೇ ವಿಜಯಪುರ ಬೆಳಗಾವಿ ಸೇರಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಇದೀಗ ಇಂದು ಧಾರವಾಡದಲ್ಲಿ ಬೃಹತ್ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಗೆ ಅನುಮತಿ ನೀಡದ ಪೊಲೀಸರ ಕ್ರಮದ ವಿರುದ್ದ  ಉದ್ಯೋಗಾಕಾಂಕ್ಷಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Key words: protest, government, delay, starting recruitments