ನಾಯಕಿಯಾಗಿ ಗಾಯಕಿ ಅನನ್ಯ ಭಟ್’ಗೆ ಪ್ರಮೋಷನ್ !

ಬೆಂಗಳೂರು, ಜನವರಿ 03, 2020 (www.justkannada.in): ಗಾಯಕಿ ಅನನ್ಯ ಭಟ್ ಅವರಿಗೆ ನಾಯಕಿಯಾಗಿ ಪ್ರಮೋಷನ್ ಸಿಕ್ಕಿದೆ!

ಯೆಸ್. ಗಾಯಕಿ ಅನನ್ಯ ಭಟ್ ಇದೀಗ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರಲು ಸಿದ್ಧತೆ ನಡೆಸಿದ್ದಾರೆ.
ಸೇನಾಪುರ ಸಿನಿಮಾದಲ್ಲಿ ನಟಿಸುವ ಮೂಲಕ ನಾಯಕಿಯಾಗಿ ಕನ್ನಡ ಚಿತ್ರಕ್ಕೆ ಕಾಲಿಡುತ್ತಿದ್ದಾರೆ.

ಎರಡು ದಶಕಗಳ ಹಿಂದೆ ಕುಂದಾಪುರ, ಬೈಂದೂರು, ಭಟ್ಕಳಗಳಲ್ಲಿ ನಡೆದ ನಿಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡ ಗುರು ಸವನ್ ಎಂಬುವರು ಸಿನಿಮಾಗೆ ಡೈರೆಕ್ಷನ್ ಮಾಡುತ್ತಿದ್ದಾರೆ.
ಅನನ್ಯಾ ಭಟ್, ಗಿರಿರಾಜ್ , ದಿನೇಶ್ ಮಂಗಳೂರು ಸೇರಿ ಕೆಲವು ಪ್ರಮುಖ ನಟರು ಸಿನಿಮಾದಲ್ಲಿ ನಟಿಸ್ತಿದ್ದಾರೆ.

(ಚಿತ್ರ ಕೃಪೆ: ಶ್ರೀಧರ್ ವಿ.ಜಿ)