ಪ್ರಿಯಾಂಕ್ ಖರ್ಗೆ ಹೇಳಿಕೆ ಶೋಭೆ, ಗೌರವ ತರುತ್ತಾ..?  ಮಾಜಿ ಸಿಎಂ ಬಿಎಸ್ ವೈ ಅಸಮಾಧಾನ.

ಮಂಡ್ಯ,ಆಗಸ್ಟ್,13,2022(www.justkannada.in): ಯುವತಿಯರು ನೌಕರಿ ಪಡೆಯಬೇಕಾದರೇ ಮಂಚ ಹತ್ತಬೇಕು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಈ ಕುರಿತು ಮಾತನಾಡಿದ ಬಿಎಸ್ ಯಡಿಯೂರಪ್ಪ, ಪ್ರಿಯಾಂಕ್ ಖರ್ಗೆ ಹೇಳಿಕೆ ಶೋಭೆ,  ಗೌರವ ತರುತ್ತಾ..? ಕಾಂಗ್ರೆಸ್ ಮುಖಂಡರಾದವರು  ಹೀಗೆ ಮಾತನಾಡಬಾರದು.  ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಬಾರದು.   ಮೊದಲು  ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು  ಎಂದು ಆಗ್ರಹಿಸಿದರು.

Key words: Priyank Kharge -statement – Former CM -BSY