Sunday, September 13, 2026

BDA Apartments

Home Crime ರಸ್ತೆ ಬದಿ ನಿಂತಿದ್ಧ ಮಕ್ಕಳಿಗೆ ಖಾಸಗಿ ಬಸ್ ಡಿಕ್ಕಿ: ಓರ್ವ ವಿದ್ಯಾರ್ಥಿನಿ ಸಾವು.

ರಸ್ತೆ ಬದಿ ನಿಂತಿದ್ಧ ಮಕ್ಕಳಿಗೆ ಖಾಸಗಿ ಬಸ್ ಡಿಕ್ಕಿ: ಓರ್ವ ವಿದ್ಯಾರ್ಥಿನಿ ಸಾವು.

ಚಿಕ್ಕಮಗಳೂರು,ಸೆಪ್ಟಂಬರ್,7,2023(www.justkannada.in):  ಬಸ್ ಗಾಗಿ ಕಾಯುತ್ತಾ ನಿಂತಿದ್ದ ಮಕ್ಕಳಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ತರಿಕೆರೆ ತಾಲ್ಲೂಕಿನ ದುಗ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತುಳಸಿ(15) ಮೃತಪಟ್ಟ ವಿದ್ಯಾರ್ಥಿನಿ. ಇಂದು ದುಗ್ಲಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್ ಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಡ್ರೈವರ್ ಕಂಟ್ರೋಲ್ ತ‍ಪ್ಪಿ ಖಾಸಗಿ ಬಸ್ ಡಿಕ್ಕಿಯಾಗಿದೆ.ರಸ್ತೆ ಬದಿ ನಿಂತಿದ್ಧ ಮಕ್ಕಳಿಗೆ ಖಾಸಗಿ ಬಸ್ ಡಿಕ್ಕಿ bus-accident bus accident

ಘಟನೆಯಲ್ಲಿ ತುಳಸಿ(14) ಮತ್ತು ನಿವೇದಿತಾ(14) ಸೇರಿ ಐವರಿಗೆ ಗಾಯಗಳಾಗಿತ್ತು. ತುಳಸಿ ಮತ್ತು ನಿವೇದಿತಾ ಸ್ಥಿತಿ ಗಂಭೀರವಾಗಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ತುಳಸಿ ಎಂಬ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words:  private bus -collided –students- died