ಮೈಸೂರು ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಂದೂಡಿಕೆ….

ಮೈಸೂರು ಡಿಸೆಂಬರ್,30, 2019(www.justkannada.in):  ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಇರುವುದರಿಂದ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

ಮುಂದೂಡಲಾಗಿರುವ ಕಾರ್ಯಕ್ರಮಗಳು ಜನವರಿ 1 ಮತ್ತು 2 ರಂದು ನಿಗದಿಪಡಿಸಲಾಗಿದೆ. ಜನವರಿ 1 ರಂದು ಸಂಜೆ 6 ರಿಂದ 7 ಗಂಟೆಯವರೆಗೆ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ, ಸಂಜೆ 7 ರಿಂದ 9 ಗಂಟೆಯವರೆಗೆ ಸುನಿತಾ ಚಂದ್ರಕುಮಾರ್ ನೇತೃತ್ವದಲ್ಲಿ ಶ್ರೀ ರಘುಲೀಲ ಸಂಗೀತ ಮಂದಿರ ತಂಡದ 110 ಮಂದಿಯಿಂದ ಶ್ರೀ ಶ್ರೀನಿವಾಸ ಕಲ್ಯಾಣ “ನೃತ್ಯ ವೈಭವ” ಕಾರ್ಯಕ್ರಮವನ್ನು ಹಾಗೂ ರಾತ್ರಿ 9 ರಿಂದ 9-30 ಗಂಟೆಯವರೆಗೆ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಶಬ್ದ ರಹಿತ ಪಟಾಕಿ ಸಿಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜನವರಿ 2 ರಂದು ಸಂಜೆ 7 ರಿಂದ 9 ಗಂಟೆಯವರೆಗೆ ಶ್ರೀ ಹರ್ಷ ಹಾಗೂ ಸರಿಗಮಪ ಮತ್ತು ಕನ್ನಡ ಕೋಗಿಲೆ ತಂಡದವರಿಂದ ಹರ್ಷಧ್ವನಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Key words: Postponement – cultural programs -mysore palace.