ಪೆನ್ ಡ್ರೈವ್ ಕೇಸ್ ಗೆ ಸುರ್ಜೇವಾಲ ಸ್ಕ್ರಿಪ್ಟ್ ರೈಟರ್, ಸಿದ್ದರಾಮಯ್ಯ ಡೈರೆಕ್ಷನ್, ಡಿಕೆಶಿ ಪ್ರೊಡ್ಯೂಸರ್- ಆರ್.ಅಶೋಕ್ ಕಿಡಿ.

ಬೆಂಗಳೂರು,ಮೇ,7,2024 (www.justkannada.in): ಸಂಸದ ಪ್ರಜ್ವಲ್ ರೇವಣ್ಣ  ವಿರುದ್ದ ಲೈಂಗಿಕ ದೌರ್ಜನ್ಯ, ಪೆನ್ ಡ್ರೈವ್  ಕೇಸ್ ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಸ್ಕ್ರಿಪ್ಟ್ ರೈಟರ್, ಸಿಎಂ ಸಿದ್ದರಾಮಯ್ಯ ಡೈರೆಕ್ಷನ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪ್ರೊಡ್ಯೂಸರ್ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್,ಒಕ್ಕಲಿಗರಿಗೆ ಅವಮಾನ ಮಾಡಲು ಒಂದು ಲಕ್ಷ ಪೆನ್ ಡ್ರೈವ್ ಹಂಚಿಕೆ ಮಾಡಿದ್ದಾರೆ. ಒಂದು ಲಕ್ಷ ಪೆನ್ ಡ್ರೈವ್ ಗಳಲ್ಲಿ ವಿಡಿಯೋ ಹಾಕಿ ಹಂಚಿದ್ದಾರೆ. ಲಿಂಗಾಯತರಿಗೆ ಅವಮಾನ ಮಾಡಿದ್ರು ಈಗ ಒಕ್ಕಲಿಗರಿಗೆ ಅಪಮಾನ ಮಾಡುತ್ತಿದ್ದಾರೆ.  ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್  ಪರ ಎಸ್ ಐಟಿ ರಬ್ಬರ್ ಸ್ಟ್ಯಾಂಪ್ ಆಗಿದೆ. ಪ್ರಜ್ವಲ್ ವಿದೇಶಕ್ಕೆ ಹೋಗುವುದರಲ್ಲೂ ಕಾಂಗ್ರೆಸ್ ಕುತಂತ್ರ ಇದೆ ಎಂದು ಆರೋಪಿಸಿದರು.

ವಿಡಿಯೋ ಇಟ್ಟುಕೊಂಡರೆ ಹಂಚಿದರೆ ಅಪರಾಧ ಎಂದು ಎಚ್ಚರಿಕೆ ವಿಚಾರವಾಗಿ ನಾನೇ ವಿಡಿಯೋ ಕೊಟ್ಟಿದ್ದು ಅಂತ ಕಾರ್ತಿಕ್ ಗೌಡ ಈಗಾಗಲೇ ತಿಳಿಸಿದ್ದಾನೆ. ಕಾರ್ತಿಕ ಗೌಡ ವಿದೇಶದಲ್ಲಿದ್ದಾನೆ ವಾಸಕ್ಕೆ ಕೋಟಿ ಖರ್ಚಾಗುತ್ತದೆ.ಇದಕ್ಕೆ ಕಾಂಗ್ರೆಸ್ ಸ್ಪಾನ್ಸರ್ ಮಾಡಿದೆ. ಎಸ್ ಐಟಿಗೆ ಗೌರವ ಇದ್ದಿದ್ದರೆ ಸಿಬಿಐ ತನಿಖೆಗೆ ಅರ್ಜಿ ಹಾಕಲಿ.  ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ ಎಂದು ಆರ್.ಅಶೋಕ್ ಹೇಳಿದರು.

Key words: Pen Drive, Case, Surjewala,  R.Ashok