ಸಾಮಾಜಿಕ ಕಲಾ ನ್ಯಾಯದಿಂದ ನನಗೆ ದಸರಾ ಉದ್ಘಾಟನೆ ಅವಕಾಶ ಸಿಕ್ಕಿದೆ-ಸಂಗೀತ ನಿರ್ದೇಶಕ ಹಂಸಲೇಖ.

ಮೈಸೂರು,ಸೆಪ್ಟಂಬರ್,12,2023(www.justkannada.in): ಸಾಮಾಜಿಕ ಕಲಾ ನ್ಯಾಯದಿಂದ ನನಗೆ ಮೈಸೂರು ದಸರಾ ಉದ್ಘಾಟನೆ ಅವಕಾಶ ಸಿಕ್ಕಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ ಅವರು, ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಇದಕ್ಕೆ ಕಾವ್ಯಕ್ಕೆ ಸಿಕ್ಕ ಗೌರವ ಅಂದ್ರು. ಸೋಷಿಯಲ್ ಜಸ್ಟಿಸ್ ಅಂತ ಕೆಲವರು ಹೇಳಿದರು‌. ಅದ್ಯಾವುದನ್ನ ವ್ಯಾಖ್ಯಾನಿಸಲು ಕಷ್ಟ. ನಾವು ಸಿನಿಮಾ ರೈಟರ್. ನನ್ನನ್ನ ಕವಿ ಅಂದರೆ, ಕವಿ ಪಟ್ಟ ಬೇಡ ಎನ್ನುತ್ತೇನೆ.  ಕವಿ ಪಟ್ಟ ತೆಗೆದುಕೊಂಡರೆ ಮೇಲು ಮಧ್ಯೆ ಕೆಳಗೆ ಅಂತ ಮೂರು ಭಾಗ ಮಾಡುತ್ತಾರೆ. ದಸರಾ ಉದ್ಘಾಟನೆ ಅವಕಾಶ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯ ಅಂತ ಹೇಳುತ್ತೇನೆ. ಸಾಮಾಜಿಕ ನ್ಯಾಯಾವು ಅಲ್ಲ, ಕಾವ್ಯಕ್ಕೆ ಸಿಕ್ಕ ನ್ಯಾಯ ಅಂತ ಹೇಳುವುದಿಲ್ಲ ಎಂದರು.

ಬರದ ನಡುವೆ ಅದ್ದೂರಿ‌ ದಸರಾ ಆಚರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹಂಸಲೇಖ, ರೈತರ ವಿಚಾರವನ್ನ ಗಮನಿಸಬೇಕು. ಹಬ್ಬದ ಮೂಲವೇ ರೈತ. ಅದರ ಬಗ್ಗೆ ನನ್ನ ಚಿಂತೆ ಜಾಸ್ತಿ ಇದೆ. ಸಮಸ್ಯೆಗಳನ್ನ ಶಾಶ್ವತವಾಗಿ ಪರಿಹಾರ ಮಾಡಬೇಕು ಎಂಬುದು ನನ್ನ ಆಸೆ. ರೈತರ ಮನಸ್ಸಿಗೆ ನೋವಾಗುವ ದುಂದುವೆಚ್ಚ ಬೇಡ ಅನ್ನೋದು ನನ್ನ ಭಾವನೆ. ಸ್ಮಾರ್ಟಿ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಆಗಬೇಕಿದೆ. ಕೃಷಿ ತಜ್ಞರು ಸಹಾಯದಿಂದ ಸ್ಮಾರ್ಟ್ ವಿಲೇಜ್ ಮಾಡಬೇಕಿದೆ ಎಂದು ತಿಳಿಸಿದರು.

ಕನ್ನಡಕ್ಕಾಗಿ ಕಾವಲಿಡಿ’ ಕನ್ನಡವನ್ನ ರಕ್ಷಿಸಬೇಕು.

ಕನ್ನಡ ಶಾಲೆ ಮುಚ್ಚುತ್ತಿರುವ ಪ್ರಶ್ನೆಗೆ ಉತ್ತರಿಸಿದ ಹಂಸಲೇಖ, ನನಗೆ ಕನ್ನಡ ಒಂದಂಶ ಆಗಬೇಕು. ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಬೇಕು. ಕನ್ನಡಕ್ಕಾಗಿ ಕಾವಲಿಡಿ’ ಕನ್ನಡವನ್ನ ರಕ್ಷಿಸಬೇಕು. ಹಿಂದಿ ಹೇರಿಕೆ‌ ಇಂದಿನಿಂದ ಅಲ್ಲ ನಾನು 8ನೇ ತರಗತಿಯಿದ್ದಾಗಿನಿಂದಲೂ ಇದೆ. ದೆಹಲಿಗೆ ಕನ್ನಡ ಬೇಕಾಗಿಲ್ಲ ನಮಗೆ ಹಿಂದಿ ಬೇಕಾಗಿಲ್ಲ. ಆದರೆ ನಮಗೆ ದೆಹಲಿ ಬೇಕಾಗಿದೆ. ಹಿಂದಿ ಹೇರುವ ಹುನ್ನಾರ ಹಿಂದಿನ ಕಾಲದಿಂದಲು ಕೂಡ ಇದೆ. ಈಗ ಅದು ಜಾಸ್ತಿಯಾಗಿದೆ ಎಂದು ಹಂಸಲೇಖ ಹೇಳಿದರು.

ಇಡೀ ಕರ್ನಾಟಕದ ಸೈಟ್‌ ಗೆ ಕನ್ನಡವೇ ಪತ್ರ. ಮೊದಲು ತಾಯಿ ಮಕ್ಕಳಿಗೆ ಕನ್ನಡದ ಬಗ್ಗೆ ಹೇಳಿಕೊಡಬೇಕು. ಇತ್ತೀಚೆಗೆ ಮಕ್ಕಳನ್ನ ಇಂಗ್ಲೀಷ್ ನಲ್ಲೇ ಓದಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಆದರೆ ಕೆಲಸ ಸಿಗೋದು ಇಂಗ್ಲಿಷ್ ಇದ್ದರೆ ಮಾತ್ರ. ಹಾಗಾಗಿ ಮನೆಯಲ್ಲಿ ಇಂಗ್ಲಿಷ್ ಕಲಿಸುವ ಹಂತಕ್ಕೆ ಹೋಗಿದ್ದಾರೆ. ಇಂಗ್ಲಿಷ್ ಕೆಲಸಕ್ಕೆ ಇಟ್ಟುಕೊಳ್ಳಿ’ ಕನ್ನಡದ ಅಸ್ಮಿತೆ ಉಳಿಸಲು ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ‌ ಆಗಬೇಕು. ಈ ವೇಳೆ‌ ಕನ್ನಡವನ್ನ ಉಳಿಸಿ ಬೆಳೆಸುವ ಕೆಲಸ ಆಗುತ್ತೆ ಎಂದರು.

ಅದೇ ರೀತಿ ಮಹಿಷಾ ದಸಾರ ವಿಚಾರವಾಗಿ ಉತ್ತರಿಸಲು ನಿರಾಕರಿಸಿದ ಹಂಸಲೇಖ, ಅಕಪಕ್ಕದ ಮನೆಯ ವಿಚಾರ ನನಗೆ ಏಕೆ.? ನನಗೆ ಕರೆದಿರೋದು ದಸರಾ ಉದ್ಘಾಟನೆಗೆ. ಅದು ಬಿಟ್ಟು ಬೇರೆ ವಿಚಾರಗಳ ಬಗ್ಗೆ ಚರ್ಚೆ ಬೇಡ. ನನಗೆ ಯಾರು ಕರೆಯುತ್ತಾರೆ ಮಹಿಷ ದಸರಾ ಉದ್ಘಾಟನೆಗೆ. ನಾನು ಈಗಾಗಲೇ ನಾಡಹಬ್ಬ ದಸರಾ ಉದ್ಘಾಟಕನಾಗಿದ್ದೇನೆ. ಒಬ್ಬನೇ ಎರಡು ಕಾರ್ಯಕ್ರಮ ಹೇಗೆ ಉದ್ಘಾಟಿಸುತ್ತಾನೆ ಎಂದು ಪ್ರಶ್ನಿಸಿದರು.

Key words: opportunity – inaugurate –dasara- Social Arts -Justice – Music Director- Hamsalekha.