Monday, September 21, 2026

BDA Apartments

Home Front Page ಐದು ಗ್ಯಾರಂಟಿ ಘೋಷಿಸುವಾಗ ಪರಿಜ್ಞಾನ ಇರಲಿಲ್ಲವಾ..? ಸಿದ್ಧರಾಮಯ್ಯ, ಡಿಕೆಶಿ ವಿರುದ್ದ ಹೆಚ್.ಡಿಕೆ ವಾಗ್ದಾಳಿ.

ಐದು ಗ್ಯಾರಂಟಿ ಘೋಷಿಸುವಾಗ ಪರಿಜ್ಞಾನ ಇರಲಿಲ್ಲವಾ..? ಸಿದ್ಧರಾಮಯ್ಯ, ಡಿಕೆಶಿ ವಿರುದ್ದ ಹೆಚ್.ಡಿಕೆ ವಾಗ್ದಾಳಿ.

ಬೆಂಗಳೂರು,ಜೂನ್,8,2023(www.justkannada.in): ಒಂದು ಗ್ಯಾರಂಟಿಯಲ್ಲ  5 ಗ್ಯಾರಂಟಿಗಳಲ್ಲೂ ಗೊಂದಲವಿದೆ. ಐದು ಗ್ಯಾರಂಟಿ ಘೋಷಿಸುವಾಗ  ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್ ಗೆ ಪರಿಜ್ಞಾನ ಇರಲಿಲ್ಲವಾ..? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಇಂಧನ ಇಲಾಖೆ ಸಚಿವ ಕೆ.ಜೆ ಜಾರ್ಜ್ ಅವರಿಗೆ ಅರ್ಥ ಆಗಿಲ್ಲ ಅನ್ನಿಸುತ್ತಿದೆ. ಸಂಪೂರ್ಣ ಮಾಹಿತಿ ಅವರಿಗೆ ಇಲ್ಲ. ಹೆಬ್ಬಾಳ್ಕರ್ ಅವರಿಗೂ ಮಾಹಿತಿ ಇಲ್ಲ ಅನ್ನಿಸುತ್ತಿದೆ. ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು? ಈಗ ಏನು ಸಬೂಬು ಕೊಡುತ್ತಾ ಇದ್ದಾರೆ ಎಂದು ಕಿಡಿಕಾರಿದರು.ಐದು ಗ್ಯಾರಂಟಿ ಘೋಷಿಸುವಾಗ ಪರಿಜ್ಞಾನ ಇರಲಿಲ್ಲವಾ..? ಸಿದ್ಧರಾಮಯ್ಯ hdk

ಎಲ್ಲರ ಖಾತೆ 15 ಲಕ್ಷ ಹಾಕಿದ್ರಾ ಎಂದು ಬಿಜೆಪಿ ಟೀಕಿಸಿದ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ ಹೆಚ್.ಡಿ ಕುಮಾರಸ್ವಾಮಿ, 15 ಲಕ್ಷ ಬಿಜೆಪಿಯವರು ಕೊಟ್ಟಿದ್ದಾರಾ ಅಂತ ಕೇಳುತ್ತಿದ್ದಾರೆ. ಅವರು ಕೊಟ್ಟಿಲ್ಲ ಅಂತ ನಾನು ಕೊಡಲ್ಲ ಅನ್ನೋದು ಎಷ್ಟು ಸರಿ ಎಂದು ಹರಿಹಾಯ್ದರು.

Key words: no sense – declaring -five guarantees-Siddaramaiah-DK Shivakumar- HD Kumaraswamy.