ಸಚಿವ ಜಮೀರ್ ಜೆಡಿಎಸ್ ಸೇರ್ತಾರಾ ಅನ್ನೋ ವಿಚಾರ: ಪಕ್ಷ ಯಾರನ್ನೂ ನೆಚ್ಚಿಕೊಂಡಿಲ್ಲ ಎಂದ ನಿಖಿಲ್

ಬೆಂಗಳೂರು,ಏಪ್ರಿಲ್,22,2026 (www.justkannada.in): ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರುತ್ತಾರೆಯೇ ಎಂಬ ವಿಷಯ ಮಾಧ್ಯಮಗಳಲ್ಲಿ ಚರ್ಚೆಯಾದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ  ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಪಕ್ಷ ಯಾರನ್ನೂ ನೆಚ್ಚಿಕೊಂಡಿಲ್ಲ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಈ ವಿಚಾರಕ್ಕೆ ಈಗಾಗಲೇ ಸಚಿವ ಜಮೀರ್ ಅಹ್ಮದ್ ಖಾನ್ ಅವರು  ಸ್ಪಷ್ಟೀಕರಣ ನೀಡಿದ್ದಾರೆ. ಜಮೀರ್ ಗೆ ಕಾಂಗ್ರೆಸ್ ಸ್ಥಾನಮಾನ ಕೊಟ್ಟಿದೆ. ಆ ಬಗ್ಗೆ ಚರ್ಚೆ ಬೇಡ. ಪಕ್ಷವನ್ನು ಕಟ್ಟಲು ಕಾರ್ಯಕರ್ತರಿದ್ದಾರೆ ಹೋರಾಟಕ್ಕೆ ಸಿದ್ದರಿದ್ದಾರೆ ಜೆಡಿಎಸ್ ಯಾರನ್ನೂ ನೆಚ್ಚಿಕೊಂಡಿಲ್ಲ ಎಂದರು.

ಸಿಎಂ ಯಾವಾಗಲೂ ಅಹಿಂದ ರಾಜಕಾರಣಿ ಎಂದು ಹೇಳುತ್ತಾರೆ. ಅಹಿಂದದಲ್ಲಿ ದ ಅನ್ನೋದು ಉರುಳಿ ಹೋಗಿದೆ. ರಾಜಣ್ಣ ನಾಗೇಂದ್ರರನ್ನ ಸಂಫುಟದಿಂದ ಕೈಬಿಡಲಾಗಿದೆ ಅಲ್ಪಸಂಖ್ಯಾತರಾದ ಜಬ್ಬಾರ್ ನಸೀರ್ ತಲೆತಂಡವಾಗಿದೆ.   ದಾವಣಗೆರೆ ದಕ್ಷಿಣದಲ್ಲಿ ಮುಸ್ಲೀಮರು ಹೆಚ್ಚಿದ್ದಾರೆ.  ಆ ಕ್ಷೇತ್ರದಲ್ಲಿ ಮುಸ್ಲೀಂ ಬಾಂಧವರಿಗೆ ಟಿಕೆಟ್ ಕೊಡಬೇಕಿತ್ತು. ಅಹಿಂದದಲ್ಲಿ ಅ ಅಲ್ಪಸಂಖ್ಯಾತ ದ ದಲಿತ ಹೋಗಿದೆ. ಉಳಿದಿರುವ ಹಿಂದುಳಿದ ಪದ ಯಾವಾಗ ಹೋಗುತ್ತೆ ಗೊತ್ತಿಲ್ಲ. ಸಂಫೂರ್ಣ ಅಹಿಂದ ಛಿಧ್ರವಾಗುತ್ತದೆಯೋ ಗೊತ್ತಿಲ್ಲ ಎಂದರು.

Key words:  Minister, Jameer, joining, JDS, Nikhil Kumaraswamy