ನವದೆಹಲಿ,ಜುಲೈ,24,2026 (www.justkannada.in): ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ವಿಪಕ್ಷಗಳು ಇಂದು ಕೂಡ ರಾಜ್ಯಸಭೆಯಲ್ಲಿ ಧರಣಿ ಮುಂದುವರೆಸಿದ್ದು, ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.
ವಂದೇ ಮಾತರಂ ಮಸೂದೆ ಮಂಡನೆ ಬಳಿಕ ರಾಜ್ಯಸಭೆಯ ಕಲಾಪವನ್ನು ಸೋಮವಾರ ಬೆಳೀಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಸಂಬಂಧ ಹೋರಾಟ ಮುಂದುವರೆದಿದ್ದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವ್ಯಾಪಕ ಆಗ್ರಹ ಕೇಳಿ ಬಂದಿದೆ.
ಕಲಾಪದಲ್ಲಿ ವಿಪಕ್ಷಗಳು ವಿದ್ಯಾರ್ಥಿಗಳ ಪರ ನಿಂತಿದ್ದರಿಂದ ವ್ಯಾಪಕ ಅಡ್ಡಿ ಉಂಟಾಗಿತ್ತು. ಈ ಮಧ್ಯೆ ಲೋಕಸಭೆಯಲ್ಲೂ ವಿಪಕ್ಷಗಳು ಧರಣಿ ಮುಂದುವರೆಸಿದ ಹಿನ್ನೆಲೆ ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾಗಿತ್ತು.
Key words: Vande Mataram Bill, Rajya Sabha, adjourned, Monday






