ನಂಜನಗೂಡು ರಥೋತ್ಸವದಲ್ಲಿ ದುರಂತ: ಒರ್ವ ಭಕ್ತ ಮೃತ

ನಂಜನಗೂಡು,ಮಾರ್ಚ್,30,2026 (www.justkannada.in):  ಪ್ರಸಿದ್ಧ ರಥೋತ್ಸವದ ವೇಳೆ ದುರ್ಘಟನೆ ಸಂಭವಿಸಿದ್ದು, ಒಬ್ಬ ಭಕ್ತ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು 56 ವರ್ಷದ ನಂಜುಂಡಸ್ವಾಮಿ ಎಂದು ಗುರುತಿಸಲಾಗಿದ್ದು, ಅವರು ಬೆಂಗಳೂರಿನ ಮಾಗಡಿ ನಿವಾಸಿಯಾಗಿದ್ದಾರೆ. ರಥೋತ್ಸವಕ್ಕೆಂದು ಆಗಮಿಸಿದ್ದ ನಂಜುಂಡಸ್ವಾಮಿ, ಜನಜಂಗುಳಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾರಿ ಜನಸಂದಣಿಯಿಂದ ಉಂಟಾದ ಅವ್ಯವಸ್ಥೆಯೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.

ENGLISH SUMMARY

Nanjangud Rathotsava Tragedy: Devotee Dies

Nanjangud: A 56-year-old devotee, Nanjundaswamy from Magadi (Bengaluru), died after getting trapped in a massive crowd during the Rathotsava.

He had come to attend the festival but was caught in the rush and sustained serious injuries. He later succumbed, police sources said.

Key words: Nanjangud Rathotsava, Tragedy, Devotee, Dies