Thursday, August 6, 2026

BDA Apartments

Home Front Page ಆರ್ಟಿಕಲ್ 370 ರದ್ದು ವಿಚಾರ ಮತ್ತು ದಸರಾ ತಯಾರಿ ವಿಳಂಬ ಕುರಿತು ರಾಜವಂಶಸ್ಥ ಯದುವೀರ್ ಪ್ರತಿಕ್ರಿಯಿಸಿದ್ದು...

ಆರ್ಟಿಕಲ್ 370 ರದ್ದು ವಿಚಾರ ಮತ್ತು ದಸರಾ ತಯಾರಿ ವಿಳಂಬ ಕುರಿತು ರಾಜವಂಶಸ್ಥ ಯದುವೀರ್ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ಆ,6,2019(www.justkannada.in):  ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ  ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸರ್ಕಾರದ ಈ ದಿಟ್ಟ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಇದೊಂದು ಭಾರತಕ್ಕೆ ಐತಿಹಾಸಿಕ ಕ್ಷಣ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ರಾಜವಂಶಸ್ಥ ಯದುವೀರ್, ಭಾರತದ ಏಕತೆಗೆ ನಾವೆಲ್ಲ ಬದ್ದರಾಗಿರಬೇಕು. ಕೇಂದ್ರ ಸರ್ಕಾರದ ಈ ದಿಟ್ಟ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಈ ಒಂದು ತೀರ್ಮಾನದಿಂದ ಕಾಶ್ಮೀರಕ್ಕೆ ಹಾಗೂ ಭಾರತಕ್ಕೆ ಅಭಿವೃದ್ದಿಯಾಗಲಿ.ಇನ್ನೂ ಮುಂದೆ ಕಾಶ್ಮೀರದಲ್ಲಿ ಶಾಂತಿ ನೆಲಸಲಿ ಎಂದು ನುಡಿದರು.

ದಸರಾ ತಯಾರಿ ವಿಳಂಭ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್, ಈ ಬಗ್ಗೆ ಸರ್ಕಾರವನ್ನೇ ಕೇಳಬೇಕು. ನಮ್ಮ ಅರಮನೆಯಲ್ಲಿ ದಸರಾ ಹೇಗೆ ನಡೆಯಬೇಕೋ ಆ ತಯಾರಿ ನಡೆಯುತ್ತಿದೆ ಎಂದರು.

ಇನ್ನು ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ‌. ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳಲು ಇಷ್ಟ ಪಡುತ್ತೇನೆ ಎಂದು ಯದುವೀರ್ ತಿಳಿಸಿದರು.

Key words: mysore-  Yaduveer –reaction- cancellation – Article 370 – delay -preparation -Dasara.