ಶಿಕ್ಷಣ ಇಲಾಖೆ ನಿವೃತ್ತ ಅಧೀಕ್ಷಕ ಎಸ್.ಲಿಂಗಯ್ಯ ನಿಧನ.

ಮೈಸೂರು,ಮೇ,9,2024 (www.justkannada.in):  ಕೆ.ಆರ್.ಆಸ್ಪತ್ರೆ ಚರ್ಮ ರೋಗ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್.ನಂಜುಂಡಸ್ವಾಮಿ ಅವರ ತಂದೆ ಶಿಕ್ಷಣ ಇಲಾಖೆ ನಿವೃತ್ತ ಅಧೀಕ್ಷಕ ಎಸ್.ಲಿಂಗಯ್ಯ (84) ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಮೃತರು ಪತ್ನಿ ಗೌರಮ್ಮ ನಾಲ್ವರು ಪುತ್ರರಾದ ಕೆ.ಆರ್.ಆಸ್ಪತ್ರೆ ಚರ್ಮರೋಗ ಮುಖ್ಯಸ್ಥ ಡಾ.ಬಿ.ಎಲ್.ನಂಜುಂಡಸ್ವಾಮಿ, ಸಾಫ್ಟ್ ವೇರ್ ಇಂಜಿನಿಯರ್ ಬಿ.ಎಲ್. ಶ್ರೀಕಂಠಮೂರ್ತಿ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಬಿ.ಎಲ್.ಕೇಶವಮೂರ್ತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಎಲ್.ಶಿವಪ್ರಸಾದ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಪಾರ್ಥೀವ ಶರೀರವನ್ನು ಅವರ ನಿವಾಸ ನಂಜನಗೂಡಿನ ಕೆ.ಎಚ್.ಬಿ.ಕಾಲೋನಿಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆವರಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ನಂತರ ಅವರ ಸ್ವಗ್ರಾಮ ಚಾಮರಾಜನಗರ ತಾಲ್ಲೂಕು ಬಿಸಲವಾಡಿ ಗ್ರಾಮಕ್ಕೆ ಕೊಂಡೊಯ್ಯಲಾಗುವುದು.

ಮೃತರ ಅಂತಿಮ‌ ದರ್ಶನವನ್ನು ಮಾಜಿ ಶಾಸಕ ಎನ್.ಮಹೇಶ್, ನಗರಸಭಾ ಸದಸ್ಯರಾದ ಎನ್.ಎಸ್.ಯೋಗೀಶ್, ಎಸ್.ಪಿ.ಮಹೇಶ್ ಅನೇಕ ವೈದ್ಯರು ಸೇರಿದಂತೆ ಹಲವರು ಪಡೆದರು. ನಾಳೆ ಮೇ. 10 ರ ಶುಕ್ರವಾರ ಬಿಸಲವಾಡಿ ಗ್ರಾಮದ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ‌.

Key words: mysore, S. Lingaiah, passed away