‘ಹಚ್ಚಹಸಿರು ಮೈಸೂರು, ವಿವೇಕಪ್ರಭೆಯ ಮೈಸೂರು’ ಕಾರ್ಯಕ್ರಮಕ್ಕೆ ಚಾಲನೆ: ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ…

ಮೈಸೂರು,ಸೆಪ್ಟಂಬರ್,27,2020(www.justkannada.in): ಶ್ರೀರಾಮಕೃಷ್ಣ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಹಚ್ಚಹಸಿರು ಮೈಸೂರು, ವಿವೇಕಪ್ರಭೆಯ ಮೈಸೂರು ಕಾರ್ಯಕ್ರಮಕ್ಕೆ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು. ಇದೇ ವೇಳೆ ಕೊರೋನಾ ವಾರಿಯರ್ಸ್ ಆಗಿ ದುಡಿದ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಯಿತು.mysore-ramakrishna-ashram-minister-st-somashekar-innugrate-food-kit-asha-worker

ಶ್ರೀ ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಜಿ ಮಹಾರಾಜ್ ಮಾತನಾಡಿ, ಪ್ರಕೃತಿಯಿಂದಾದ ಸಮಸ್ಯೆಗಳನ್ನು ಪ್ರಕೃತಿ ಸರಿಮಾಡಿಕೊಳ್ಳುತ್ತದೆ. ಆದರೆ, ಮಾನವ ಮಾಡುವ ತಪ್ಪುಗಳನ್ನು ಆತನೇ ಸರಿಪಡಿಸಿಕೊಳ್ಳಬೇಕು. ಹೀಗಾಗಿ ಮೈಸೂರನ್ನು ಹಸಿರೀಕರಣ ಮಾಡಿ ಪ್ರತಿಮನೆಗೆ ಸ್ವಚ್ಛ ಉಸಿರನ್ನು ಕೊಡುವ ಕೆಲಸವನ್ನು ಆಶ್ರಮದ ಮೂಲಕ ಮಾಡುತ್ತಿದ್ದೇವೆ ಎಂದು ಹೇಳಿದರು.

ಔಷಧೀಯ ಸಸ್ಯಗಳು ಸೇರಿದಂತೆ ಅತ್ಯವಶ್ಯಕ ಸಸಿಗಳನ್ನು ಕೊಡುವ ನಿಟ್ಟಿನಲ್ಲಿ ಆಶ್ರಮ ಮುಂದಾಗಿದ್ದು, ಒಟ್ಟು 8 ಸಸ್ಯಗಳನ್ನು ಪ್ರತಿ ಮನೆಗೆ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಜವಾಬ್ದಾರಿ ಬೆಳೆಸುವ ಕಾರ್ಯಕ್ಕೆ ಮುಂದಾಗಲಾಗಿದೆ. ಅಲ್ಲದೆ ಶಿಕ್ಷಣದ ಮೂಲಕ ವಿವೇಕವನ್ನು ಮೂಡಿಸುವ ಕೆಲಸವೂ ಆಗುತ್ತಿದೆ ಎಂದು ತಿಳಿಸಿದರು.

ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ, ಸಚಿವರಾದ ಸೋಮಶೇಖರ್ ಅವರು ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಾಗ ಕೊರೋನಾ ಉಚ್ಛ್ರಾಯ ಪರಿಸ್ಥಿತಿಯಲ್ಲಿತ್ತು. ಆಗ ಕೊರೋನಾ ಮುಕ್ತ ಮಾಡುವಲ್ಲಿ ಶ್ರಮಿಸುವ ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಇದರ ಪರಿಣಾಮವಾಗಿ ಹಸಿರು ಮೈಸೂರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದರು. ಇದಕ್ಕೆ ಪೂರಕವಾಗಿ ರಾಮಕೃಷ್ಣ ಆಶ್ರಮದವರು ಕೈಜೋಡಿಸಿ ಹಚ್ಚಹಸಿರ ಮೈಸೂರು ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.mysore-ramakrishna-ashram-minister-st-somashekar-innugrate-food-kit-asha-worker

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಆಶ್ರಮದ ವತಿಯಿಂದ ವಿತರಣೆ ಮಾಡಲಾಯಿತು. ಶಾಸಕರಾದ ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Key words: mysore-ramakrishna ashram-minister- ST somashekar-innugrate- Food kit – Asha worker