ಹೃದಯಾಘಾತದಿಂದ ಕೊರೋನಾ ವಾರಿಯರ್ಸ್ ಸಾವು….

ಮೈಸೂರು,ಜು,29,2020(www.justkannada.in):  ರಾಜ್ಯದಲ್ಲಿನ ಕೊರೋನಾ ಸಂಕಷ್ಟದ ನಡುವೆ ಹಗಲಿರುಳು ಸೇವೆ ಸಲ್ಲಿಸಿದ್ದ ಕೊರೋನಾ ವಾರಿಯರ್ಸ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.jk-logo-justkannada-logo

ಮೈಸೂರು ಜಿಲ್ಲೆ ಪಿರಿಯಪ್ಟಣ ತಾಲ್ಲೂಕು ವೈದ್ಯಾಧಿಕಾರಿ ಡಾ ನಾಗೇಶ್ ಮೃತಪಟ್ಟ ವೈದ್ಯ. ಮೃತ ಡಾ.ನಾಗೇಶ್ ಕೊರೋನಾ ಸಂಕಷ್ಟದಲ್ಲಿ ಹಗಲು ರಾತ್ರಿ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದರು. ಈ ನಡುವೆ ರಾಜ್ಯದಲ್ಲಿ  ಕೊರೋನಾ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದೆ.  ಈ ಹಿನ್ನೆಲೆ ದಿನೇ ದಿನೇ ವೈದ್ಯರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ.mysore- Corona Warriors- death - heart attack.

ಹೆಚ್ಚಿನ ಕಾರ್ಯ ಒತ್ತಡ ಹಿನ್ನೆಲೆ ಇಂದು ಬೆಳಿಗ್ಗೆ ವೈದ್ಯಾಧಿಕಾರಿ ನಾಗೇಶ್ ಅವರಿಗೆ ಹೃದಯಘಾತವಾಗಿದ್ದು, ಈ ವೇಳೆ ಅವರು ಮೃತಪಟ್ಟಿದ್ದಾರೆ. ಮೃತ ಡಾ ನಾಗೇಶ್ ಪತ್ನಿ ಹಾಗೂ ಓರ್ವ ಪುತ್ರನನ್ನ ಅಗಲಿದ್ದಾರೆ.

Key words: mysore- Corona Warriors- death – heart attack.