ಮದುವೆಯಾದ ದಿನವೇ ಪತ್ನಿಯನ್ನ ಕೊಂದ ಪತಿ ಅರೆಸ್ಟ್…

ಮೈಸೂರು, ಅ,18,2019(www.justkanadda.in): ಪ್ರೀತಿಸುತ್ತಿದ್ದ ಹುಡುಗಿಯನ್ನ ಮದುವೆಗೂ ಮುನ್ನವೇ ಗರ್ಭಿಣಿ ಮಾಡಿ ನಂತರ ವಿವಾಹವಾಗಿ ಮೊದಲ ದಿನವೇ ಗರ್ಭಿಣಿ ಪತ್ನಿಯನ್ನ ಪತಿ ಮಹಾಶಯ ಹತ್ಯೆಗೈದಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಲಕ್ಷ್ಮೀಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಗಮ್ಮ ಹತ್ಯೆಯಾದ ಪತ್ನಿ. ಪವನ್(19) ಎಂಬಾತನೇ ಹತ್ಯೆಗೈದ ಪತಿ. ನಾಗಮ್ಮ ಮತ್ತು ಪವನ್ ಹುಣಸೂರಿನ ಗಿರಿಜನ ಆಶ್ರಮ ಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಒಟ್ಟಿಗೇ ವ್ಯಾಸಂಗ ಮಾಡಿದ್ದರು. ಈ ನಡುವೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಆದರೆ ಮದುವೆಗೂ ಮುನ್ನವೇ ಇಬ್ಬರು ದೈಹಿಕ ಸಂಪರ್ಕ ಬೆಳೆಸಿದ್ದು ಪರಿಣಾಮ ನಾಗಮ್ಮ ಗರ್ಭಿಣಿಯಾಗಿದ್ದಳು. ಈ ವಿಚಾರ ತಿಳಿದ ಪವನ್ ಆಕೆಯನ್ನ ಮದುವೆಯಾಗಲು ನಿರಾಕರಿಸಿದ್ದ. ಆದರೆ ಗ್ರಾಮದಲ್ಲಿ ರಾಜಿ ಪಂಚಾಯ್ತಿ ಮಾಡಿ ಇಬ್ಬರಿಗೂ ಮದುವೆ ಮಾಡಿಸಲಾಗಿತ್ತು. ಮದುವೆಯಾದ ಮೊದಲ ದಿನವೇ ಪವನ್ ತನ್ನ ಗರ್ಬಿಣಿ ಪತ್ನಿಯನ್ನ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪವನ್ ನನ್ನ ಪೊಲೀಸರು ಬಂಧಿಸಿದ್ದಾರೆ.

Key words: mysore-Arrest – husband – killed – pregnant wife – married.