ಮೈಸೂರಿನ ಐಶ್(AIISH)ನಲ್ಲಿ ವಿಚಾರ ಸಂಕಿರಣ: ಸಂವಹನ ದೋಷವುಳ್ಳ ಮಕ್ಕಳಿಗೆ  ಬಾಲ್ಯ ಶಿಕ್ಷಣ, ಮಹತ್ವದ ಬಗ್ಗೆ ತಿಳಿಸಿದ ಗಣ್ಯರು…

ಮೈಸೂರು,ಫೆ, 17,2020(www.justkannada.in):  ವಿಶೇಷ ಮಕ್ಕಳ ಸುಧಾರಣೆಗಾಗಿ ದೇಶಾದ್ಯಂತ ಎಲ್ಲಾ ಕೇಂದ್ರೀಯ ವಿದ್ಯಾಲಯದಲ್ಲಿ ಒಬ್ಬ ವಿಶೇಷ ಶಿಕ್ಷಕ ಇರಬೇಕು ಎಂದು ಭಾರತ ಸರ್ಕಾರ ಹೇಳಿದೆ ಎಂದು  ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ನಿರ್ದೇಶಕಿ ಎಂ.ಪುಷ್ಪವತಿ ತಿಳಿಸಿದರು.

ಸಂವಹನ ದೋಷವುಳ್ಳ ಮಕ್ಕಳಿಗೆ  ಬಾಲ್ಯ ಶಿಕ್ಷಣ , ಮಹತ್ವ ಕುರಿತು ಮೈಸೂರು ಐಶ್(AIISH) ನ ವಿಶೇಷ ಶಿಕ್ಷಣ ಇಲಾಖೆಯಿಂದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಐಶ್ ನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ವಿಚಾರಸಂಕಿರಣವನ್ನ ಚೆನ್ನೈನ ಎನ್‍ ಐಪಿಎಂಇಡಿ ನಿರ್ದೇಶಕ ಹಿಮಾಂಗ್ಶು ದಾಸ್ ಉದ್ಘಾಟಿಸಿದರು.

ವಿಚಾರಸಂಕಿರಣದಲ್ಲಿ ಮಾತನಾಡಿದ ಐಶ್ ನಿರ್ದೇಶಕಿ ಡಾ.ಪುಷ್ಪಾವತಿ, ಒಮ್ಮೆ ವಿಶೇಷ ಮಕ್ಕಳಿಗೆ ವಿಶೇಷ ಶಿಕ್ಷಕರ ಸೌಲಭ್ಯ ದೊರೆತರೆ, ಅವರಿಗೆ ಉತ್ತಮ ತರಬೇತಿ ವಿಧಾನವನ್ನು ಒದಗಿಸಬಹುದು.  ವಿಶೇಷ ಶಿಕ್ಷಕರು ವಿಶೇಷ ಮಕ್ಕಳಿಗೆ ಸರಳ ವಿಧಾನದಲ್ಲಿ ಕಲಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ, ಪ್ರತಿಯೊಂದು ಶಾಲೆಯಲ್ಲಿ ಭಾಷಣ ರೋಗಶಾಸ್ತ್ರಜ್ಞ, ವಿಶೇಷ ಶಿಕ್ಷಕರು, ಭೌತಚಿಕಿತ್ಸಕಇರುತ್ತಾರೆ ಎಂದು ಹೇಳಿದರು.

ಐಶ್ ಸಂಸ್ಥೆಯ ವಿಶೇಷ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಅಲೋಕ್ ಕುಮಾರ್ ಉಪಾಧ್ಯಾಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Keywords: mysore-AIISH- seminar – Early Childhood- Education – Children with Communication Disorde