ವಿಡಿಯೋ ಸಂದೇಶ ನೀಡಿ ಬಳಿಕ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ….

ಮೈಸೂರು,ಅಕ್ಟೋಬರ್,11,2020(www.justkannada.in): ಇಬ್ಬರು ವ್ಯಕ್ತಿಗಳ ಕಿರುಕುಳದಿಂದ ಸಾಯುತ್ತಿರುವುದಾಗಿ ಮೊಬೈಲ್ ವೀಡಿಯೋ ಸಂದೇಶ ನೀಡಿ ಬಳಿಕ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.jk-logo-justkannada-logo

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯಲ್ಲಿ ಈ ಘಟನೆ‌ ನಡೆದಿದೆ. ಪಂಚವಳ್ಳಿ ಗ್ರಾಮದ ನಿವಾಸಿ ಯೋಗೇಶ್ (35) ಮೃತ ಪಟ್ಟವರು. ಇಬ್ಬರು ವ್ಯಕ್ತಿಗಳ ಕಿರುಕುಳದಿಂದ ಸಾಯುತ್ತಿರುವುದಾಗಿ ಮೊಬೈಲ್ ವೀಡಿಯೋ ಸಂದೇಶ ನೀಡಿದ ಬಳಿಕ ಯೋಗೇಶ್ ನಾಪತ್ತೆಯಾಗಿದ್ದರು.mysore-after-video-message-man-found-dead-body

ನಂತರ ಯೋಗೇಶ್ ಗಾಗಿ ಕುಟುಂಬದ ಸದಸ್ಯರು ತೀವ್ರ ಹುಟುಕಾಟ ನಡೆಸಿದ್ದರು. ನಂತರ ಪಂಚವಳ್ಳಿ ಬಳಿಯಿರುವ ಕಲ್ಲುಕೋರೆ ಗುಂಡಿಯಲ್ಲಿ ಯೋಗೇಶ್ ಶವವಾಗಿ ಪತ್ತೆಯಾಗಿದ್ದಾರೆ. ಯೋಗೇಶ್ ಸಾವನ್ನಪ್ಪಿದ ನಂತರ ಘಟನೆ ಕುರಿತು ಅಣ್ಣ ಮಲ್ಲೇಶ್ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- After -video message- man – found- dead body