ಅಭಿವೃದ್ದಿಗೆ ಸಹಕರಿಸುವವರಿಗೆ ನನ್ನ ಮತ- ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್.

ಬೆಂಗಳೂರು,ಫೆಬ್ರವರಿ,27,2024(www.kannada.in): ರಾಜ್ಯದ ನಾಲ್ಕು ಸ್ಥಾನಗಳಿಗೆ ರಾಜ್ಯಸಭೆ ಚುನಾವಣೆ ನಡೆಯುತ್ತಿದ್ದು ಅಭಿವೃದ್ದಿಗೆ ಸಹಕರಿಸುವವರಿಗೆ  ನನ್ನ ಮತ ಎಂದು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್,  ಹಿಂದೆ ನಿರ್ಮಲಾ ಸೀತಾರಾಮನ್ ಗೆ ಮತಹಾಕಿದ್ದೆ ಆದರೆ ಅಭಿವೃದ್ದಿಗೆ ಸಹಕರಿಸಲಿಲ್ಲ.  ನನ್ನ ಕ್ಷೇತ್ರಕ್ಕೆ  ಸಹಾಯ ಮಾಡುವವರಿಗೆ ಮತ ಹಾಕುತ್ತೇನೆ ಎಂದಿದ್ದಾರೆ.

ಮೂರು ಪಕ್ಷದವರು ನನ್ನನ್ನು ಸಂಪರ್ಕಿಸಿದ್ದಾರೆ. ನನ್ನ ಸಂಪರ್ಕಿಸಿದವರಿಗೆ ಷರತ್ತು ಹಾಕಿದ್ದೇನೆ.  ಯಶವಂತಪುರ ಕ್ಷೇತ್ರಕ್ಕೆ ಅನುದಾನ ನೀಡುವವರಿಗೆ ಮತ ಹಾಕುವುದಾಗಿ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

Key words: My vote – contribute – development – BJP MLA- ST Somashekhar.