ಇಎಸ್ ಐ ಆಸ್ಪತ್ರೆಗೆ ಉಪಕರಣ ಮತ್ತು ಸಿಬ್ಬಂದಿ ಕೊರತೆ ನೀಗಿಸುವಂತೆ ಸಚಿವ ಶಿವರಾಂ ಹೆಬ್ಬಾರ್ ಗೆ ಸಂಸದ ಪ್ರತಾಪ್ ಸಿಂಹ ಮನವಿ…

 

ಮೈಸೂರು,ಫೆಬ್ರವರಿ,26,2021(www.justkannada.in): ಮೈಸೂರಿನ ಕೆ.ಆರ್ ಎಸ್ ರಸ್ತೆಯಲ್ಲಿರುವ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಅವಶ್ಯವಿರುವ ಉಪಕರಣ ಒದಗಿಸುವಂತೆ ಹಾಗೂ ಸಿಬ್ಬಂದಿ ಕೊರತೆಯನ್ನ ನೀಗಿಸುವಂತೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.jk

ಇಂದು ಸಂಸದ ಪ್ರತಾಪ್ ಸಿಂಹ ಮೈಸೂರು ಕೆ.ಆರ್.ಎಸ್. ರಸ್ತೆಯಲ್ಲಿರುವ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಅವಶ್ಯಕವಿರುವ ಸುಮಾರು ರೂ.8,58,65,000/-ಗಳ ವೈದ್ಯಕೀಯ ಉಪಕರಣಗಳನ್ನು ಒದಗಿಸುವಂತೆ ಹಾಗೂ ಸಿಬ್ಬಂದಿ ಕೊರತೆ ಪೂರೈಸುವಂತೆ ಕಾರ್ಮಿಕ ಸಚಿವ ಎ ಶಿವರಾಮ್ ಹೆಬ್ಬಾರ್  ಅವರಲ್ಲಿ ಮನವಿ ಮಾಡಿದರು.

ಇದಕ್ಕೆ ಕೂಡಲೆ ಸ್ಪಂದಿಸಿದ ಸಚಿವ ಶಿವರಾಂ ಹೆಬ್ಬಾರ್,  ಸುಮಾರು ರೂ.8,58,65,000/-ಗಳ ವೈದ್ಯಕೀಯ ಉಪಕರಣಗಳಿಗೆ ಅನುಮೋದನೆ ನೀಡಿದ್ದು, ಕೂಡಲೇ ಸಿಬ್ಬಂದಿಯ ನೇಮಕ ಮಾಡುವುದಾಗಿ ಭರವಸೆ ನೀಡಿದ್ದಾರೆ.MP Pratap simha- appeals -Minister -Shivaram Hebbar -supply -equipment -staff -ESI hospital

ಕುಶಾಲನಗರದಲ್ಲಿ 100 ಹಾಸಿಗೆಗಳ ESI ಆಸ್ಪತ್ರೆ ತೆರೆಯುವಂತೆ ಮನವಿ…

ಹಾಗೆಯೇ  ಕೊಡಗಿನ ಕುಶಾಲನಗರದಲ್ಲಿ 100 ಹಾಸಿಗೆಗಳ ಇಎಸ್ ಐ ಆಸ್ಪತ್ರೆ ತೆರೆಯುವಂತೆ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದು, ಸಂಸದರ ಮನವಿಗೆ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಕೋಲಾರ ಸಂಸದರಾದ ಮುನಿಸ್ವಾಮಿಯವರೂ ಜತೆಗಿದ್ದರು.

Key words: MP Pratap simha- appeals -Minister -Shivaram Hebbar -supply -equipment -staff -ESI hospital