ಸಿಎಂಗೆ ಶಾಸಕರು ಪತ್ರ ಬರೆದಿದ್ದಾರೆಂಬುದು ಸುಳ್ಳು: ಸಚಿವ ಪ್ರಿಯಾಂಕ್ ಖರ್ಗೆ.

ಬೆಂಗಳೂರು,ಜುಲೈ,27,2023(www.justkannada.in): ಕೆಲ ಸಚಿವರ ವಿರುದ್ಧ ಕಾಂಗ್ರೆಸ್ ​ನ ಹಿರಿಯ ಶಾಸಕರು ಅಸಮಾಧಾನ  ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದಿದ್ದಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿರುವ  ಗ್ರಾಮೀಣಾಭೀವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂಗೆ ಶಾಸಕರು ಪತ್ರ ಬರೆದಿರುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಇಂದು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ,  ಎರಡು ಬಾರಿ ಶಾಸಕಾಂಗ ಸಭೆ ಮುಂದೂಡಿಕೆ ಆಗಿತ್ತು, ಹಾಗಾಗಿ  ಸಿಎಲ್ ಪಿ ಸಭೆ ಕರೆದಿದ್ದಾರೆ. ಇದನ್ನೇ ಬಿಜೆಪಿ ನಾಯಕರು ಫೋಟೋಶಾಪ್​​ ಮಾಡಿ ಹಾಕಿದ್ದಾರೆ. ಆ ಬಗ್ಗೆ ಕ್ರಿಮಿನಲ್ ಕೇಸ್ ಹಾಕಿ ತನಿಖೆಗೆ ಕೊಡಲಾಗಿದೆ. ಓರ್ವ ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅನ್ನೋದು ತಪ್ಪಾ? ಎಂದು ಕಿಡಿಕಾರಿದರು.

ಕಳೆದ ಸರ್ಕಾರದಲ್ಲಿ ಅನುಮತಿ ಇಲ್ಲದೆ ಅನುದಾನ ಮಂಜೂರು ಆಗಿದೆ. ಈಗಾಗಲೇ ಗ್ಯಾರಂಟಿ ಯೋಜನೆ ಜಾರಿಮಾಡಲಾಗಿದ್ದು,  ಕಾಮಗಾರಿಗೆ ಈ ವರ್ಷ ತೊಂದರೆ ಆಗಲಿದೆ ಅಂತಾ ಸಿಎಂ ಹೇಳಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

Key words: MLA-letter – CM-Minister- Priyank Kharge