ಸಂಪುಟ ವಿಸ್ತರಣೆ ವಿಚಾರ: ಸಿಎಂ, ಮಾಜಿ ಸಿಎಂ ಇಬ್ಬರನ್ನೂ ಭೇಟಿಯಾಗ್ತೇನೆ- ಶಾಸಕ ಲಕ್ಷ್ಮಣ್ ಸವದಿ

ನವದೆಹಲಿ,ಜುಲೈ,16,2026 (www.justkannada.in):  ಸಚಿವ ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿದ್ದು ಸಿಎಂ ಮತ್ತು ಮಾಜಿ ಸಿಎಂ ಇಬ್ಬರನ್ನೂ ಭೇಟಿ ಮಾಡುತ್ತೇನೆ ಎಂದಿದ್ದಾರೆ.

ನವದೆಹಲಿಯಲ್ಲಿ ಇಂದು ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, ಸಹಜವಾಗಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷ ಬದಲಿಸುವಾಗ ನೀಡಿದ ಭರವಸೆ ಬಗ್ಗೆ ಬಹಿರಂಗ ಚರ್ಚೆ ಮಾಡಲ್ಲ. ಬೆಳಗವಿ ದೊಡ್ಡ ಜಿಲ್ಲೆ ಹೀಗಾಗಿ ಸಚಿವ ಸ್ಥಾನಕ್ಕೆ ಪೈಪೋಟಿ ಇದೆ.

ಎರಡಕ್ಕಿಂತ ಹೆಚ್ಚು ಮಂತ್ರಿ ಸ್ಥಾನ ಕೊಟ್ಟಿರುವ ಉದಾಹರಣೆ ಇದೆ. ಹೈಕಮಾಂಡ್ ನಾಯಕರನ್ನೂ ಭೇಟಯಾಗಿ ಚರ್ಚಿಸುತ್ತೇನೆ ಎಂದು  ಶಾಸಕ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

Key words: Cabinet expansion, issue, MLA, Laxman Savadi