Thursday, July 30, 2026

BDA Apartments

Home Front Page ಬಿಡದಿ ಟೌನ್ ಶಿಪ್ ಗೆ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷ ವಿರೋಧ?

ಬಿಡದಿ ಟೌನ್ ಶಿಪ್ ಗೆ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷ ವಿರೋಧ?

ಬೆಂಗಳೂರು,ಜೂನ್,15,2026 (www.justkannada.in): ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ವತಃ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಯಾವುದೇ ಕಾರ್ಯಕ್ರಮ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು. ಈ ವಿಚಾರ ಮುಂದಿನ ಸಚಿವ ಸಂಫುಟ ಸಭೆಯಲ್ಲಿ ಚರ್ಚೆಗೆ ಬರುತ್ತದೆ.   ನೋಡೋಣ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ.  ಯಾವುದೇ ಒಂದು ವಿಚಾರ ಸರ್ಕಾರಕ್ಕೆ ಹೊರೆಯಾಗಬಾರದು ಪಕ್ಷಕ್ಕೂ ಡ್ಯಾಮೇಜ್ ಆಗಬಾರದು ಎಂದರು.

ಇನ್ನು ಮುಖ್ಯಮಂತ್ರಿಗಳ ಭೇಟಿಯಲ್ಲಿ ವಿಶೇಷತೆ ಏನು ಇಲ್ಲ. ಸಿಎಂ ಡಿಕೆ ಶಿವಕುಮಾರ್ ಜೊತೆ ಇಲಾಖೆ ಬಗ್ಗೆ ಚರ್ಚಿಸಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಮೀಸಲಾತಿ ಜಾರಿಗೆ ವಿಳಂಬ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ,  ಬಿಜೆಪಿಯವರಿಗೆ ಬೇರೆ ವಿಚಾರ ಇಲ್ಲ, ರಾಜಕೀಯ ಮಾಡುತ್ತಾರೆ. ಕೋರ್ಟ್ ನಲ್ಲಿ ಸರಕಾರ ಪರ ಯಾರು ಅಟೆಂಡ್ ಆಗಿಲ್ಲ.  ನಮ್ಮ ಪರವಾಗಿ ಅನುಕೂಲ ಆಗುವ ರೀತಿ ವಾದ ಮಾಡಬೇಕಿದೆ ಎಂದು ಹೇಳಿದರು.

Key words: Minister, Satish Jarkiholi, indirect, opposition, Bidadi Township