ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಮಂತ್ರಿ ಸ್ಥಾನ ಇರಬೇಕಿತ್ತು- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಜೂನ್,4,2026 (www.justkannada.in):  ಕೆಪಿಸಿಸಿ ಅಧ್ಯಕ್ಷ ಸ್ಥಾನ ಪ್ರಬಲ ಆಕಾಂಕ್ಷಿಯಾಗಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು ತಮಗೆ ಈ ಸ್ಥಾನ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ನಮ್ಮ ಪಕ್ಷದಲ್ಲಿ ಒಬ್ಬರಿಗೆ ಒಂದು ಪೋಸ್ಟ್ ಅಂತಲೇ ಇದ್ದಿದ್ದು. ಅದು ಕೈತಪ್ಪಿದ್ದಲ್ಲ ಕ್ಲಿಯರ್ ಆಗಿಯೇ ಇತ್ತು. ವಂಚಿತ ಅಂತೇನಿಲ್ಲ. ಬಿ.ಕೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದೆ ಕೆಲಸ ಮಾಡುತ್ತಾರೆ.  ಒಬ್ಬರಿಗೆ ಒಂದು ಪೋಸ್ಟ್ ಬಂದಾಗ ಡಿಕೆ ಶಿವಕುಮಾರ್ ಆ ಪೋಸ್ಟ್ ನಲ್ಲಿ ಇದ್ದರು. ಆಗ  ಅವರನ್ನು ಇಳಿಸೋದು ಸರಿಯಲ್ಲ ಅಂತಾ ಸುಮ್ಮನಿದ್ದರು. ಮಂತ್ರಿಗಿರಿ ಬೇಕಿತ್ತು ಹಾಗಾಗಿ ಕೆಪಿಸಿಸಿ ವಿಚಾರವಾಗಿ ಸುಮ್ಮನಾದ್ವಿ ಎಂದರು.

ಕೊನೆ ಗಳಿಗೆಯಲ್ಲೂ ಮಂತ್ರಿಸ್ತಾನ ಅಲ್ಲ . ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂತಲೇ ಇತ್ತು. ಮುಖ್ಯಮಂತ್ರಿ ಹುದ್ದೆಗಿಂತ ಮೇಲೆ ಕೆಪಿಸಿಸಿ ಅಧ್ಯಕ್ಷರ ಹುದ್ದೆ ಇದೆ.  ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಮಂತ್ರಿ ಸ್ಥಾನ ಇರಬೇಕಿತ್ತು ಎಂದರು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಖಾತೆ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ನನಗೆ ಹೊಸ ಖಾತೆ ಬೇಡ ಹಿಂದೆ ಕೊಟ್ಟ ಖಾತೆಯೇ ಸಾಕು.  ಮೂರು ವರ್ಷ ಲೋಕೋಪಯೋಗಿ ಇಲಾಖೆ ನಿರ್ವಹಿಸಿದ್ದೇನೆ ಎಂದರು.

Key words: ministerial post, with, KPCC president, Minister, Satish Jarkiholi