Friday, September 11, 2026

BDA Apartments

Home Front Page ಪ್ರಿಯಾಂಕ್ ಖರ್ಗೆಗೆ ತಾಕತ್ತಿದ್ದರೆ ಅವರ ತಂದೆಯನ್ನ ಸಿಎಂ ಮಾಡಿ ತೋರಿಸಲಿ- ಮಾಜಿ ಶಾಸಕ ಸವಾಲು

ಪ್ರಿಯಾಂಕ್ ಖರ್ಗೆಗೆ ತಾಕತ್ತಿದ್ದರೆ ಅವರ ತಂದೆಯನ್ನ ಸಿಎಂ ಮಾಡಿ ತೋರಿಸಲಿ- ಮಾಜಿ ಶಾಸಕ ಸವಾಲು

ಕೊಡಗು, ಅಕ್ಟೋಬರ್,20,2025 (www.justkannada.in):  ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಸೇರಿ ಖಾಸಗಿ ಸಂಘ ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಪಡೆಯಬೇಕೆಂದು ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ನಾಯಕರು ಮುಗಿಬಿದ್ದಿದ್ದು ಇದೀಗ ಸಚಿವ ಪ್ರಿಯಾಂಕ್ ಖರ್ಗೆಗೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಸವಾಲು ಹಾಕಿದ್ದಾರೆ.

ಪ್ರಿಯಾಂಕ್ ಖರ್ಗೆಗೆ ತಾಕತ್ತಿದ್ದರೆ ಅವರ ತಂದೆಯನ್ನ ಸಿಎಂ ಮಾಡಿ ತೋರಿಸಲಿ. ದಲಿತರ ಒಬ್ಬರನ್ನ ಸಿಎಂ ಮಾಡಲಿ ಎಂದು  ಮಾಜಿ ಶಾಸಕ ಅಪ್ಪಚ್ಚು ರಂಜನ್ ಸವಾಲು ಹಾಕಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅಪ್ಪಚ್ಚು ರಂಜನ್, ಸಿಎಂ ಸಿದ್ದರಾಮಯ್ಯ ಪ್ರಿಯಾಂಕ್ ಖರ್ಗೆಗೆ  ತಾಕತ್ತಿದ್ದರೇ ಆರ್ ಎಸ್ ಎಸ್ ಬ್ಯಾನ್ ಮಾಡಲಿ. ಆರ್ ಎಸ್ಎಸ್ ಕಂಡರೆ ಸರ್ಕಾರಕ್ಕೆ ಭಯ. ಹೀಗೆ ಆದರೆ ದೇಶದಲ್ಲಿ ದಂಗೆಯಾಗುತ್ತದೆ.   ಖರ್ಗ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿಯ ಆಗಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದೆ ಎಂದು ವಾಗ್ದಾಳಿ ನಡೆಸಿದರು.

Key words:  Minister, Priyank Kharge, father, CM, former MLA, challenges