ಮಂಡ್ಯದಿಂದ ಹೆಚ್.ಡಿಕೆ ಸ್ಪರ್ಧೆ ಕುರಿತು ವ್ಯಂಗ್ಯವಾಡಿದ ಸಚಿವ ಚಲುವರಾಯಸ್ವಾಮಿ.

ಮಂಡ್ಯ,ಮಾರ್ಚ್,26,2024 ,(www.justkannada.in):  ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡವಿದೆ ಎನ್ನಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಚಲುವರಾಯಸ್ವಾಮಿ,  ಮಂಡ್ಯ ಕ್ಷೇತ್ರದಿಂದ ಪುಟ್ಟರಾಜು ಅಭ್ಯರ್ಥಿಯಾಗಲಿ ಎಂದು ಮೊದಲು ಹೇಳಿದ್ದರು.ಈಗ ಕುಮಾರಸ್ವಾಮಿಯೇ ಅಭ್ಯರ್ಥಿ ಆಗಲಿದ್ದಾರಂತೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತೆ ಆಗಿದೆ.  ಪಾಪ ಪುಟ್ಟರಾಜು ನೇತೃತ್ವದಲ್ಲಿ ಸಭೆ ಮಾಡಿಸಿದ್ದರು. ಪುಟ್ಟರಾಜು ದೇವಸ್ಥಾನ ಎಲ್ಲವನ್ನು ಸುತ್ತಿ ಬಂದಿದ್ದರು.   ಒಳ್ಳೆ ಹುಡುಗಿ ಇದ್ದಾಳೆ ನಾನೇ ಮದುವೆಯಾಗುತ್ತೇನೆ. ಪುಟ್ಟರಾಜುಗೆ ಮುಂದೆ ಒಳ್ಳೆ ಹುಡುಗಿ ಹುಡುಕೋಣ ಎಂದಿದ್ದಾರೆ ಎಂದು ಲೇವಡಿ ಮಾಡಿದರು.

ಹೆಚ್.ಡಿಕೆ ಹೋದಲೆಲ್ಲಾ ಕರ್ಮಭೂಮಿ ಅಂತಾರೆ.  ಕಳೆದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನ ನಿಂದಿಸಿದ್ದರು ಈಗ ಅಕ್ಕ, ಸಹೋದರಿ ಅನ್ನುತ್ತಿದ್ದಾರೆ.  ಕಳೆದ ಬಾರಿಯೇ ಅಕ್ಕ ಗೆಲ್ಲಲ್ಲಿ ಎನ್ನಬಹುದಿತ್ತು. ಆದರೆ ಈಗ ಅಕ್ಕ  ಅನ್ನುತ್ತಿದ್ದಾರೆ.  ಕಳೆದ ಚುನಾವಣೆಯಲ್ಲಿ ಈ ಮಾತು ಹೇಳಿದ್ದರೇ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು ಎಂದು ಚಲುವರಾಯಸ್ವಾಮಿ ತಿಳಿಸಿದರು.

Key words: Minister, Chaluvarayaswamy,HD Kumaraswamy