Wednesday, August 12, 2026

BDA Apartments

Home Front Page ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ: ಗೃಹಸಚಿವರಾಗಲು ಬಸವರಾಜ ಬೊಮ್ಮಾಯಿ ಅನ್ ಫಿಟ್ ಎಂದ ಮಾಜಿ ಸಿಎಂ...

ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ: ಗೃಹಸಚಿವರಾಗಲು ಬಸವರಾಜ ಬೊಮ್ಮಾಯಿ ಅನ್ ಫಿಟ್ ಎಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ….

ಮಂಗಳೂರು,ಡಿ,22,2019(www.justkannada.in):  ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ  ಪೊಲೀಸರ ಗುಂಡಿಗೆ ಬಲಿಯಾದ ನೌಶಿನ್ ಮತ್ತು ಜಲೀಲ್ ನಿವಾಸಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.  ಮೃತರ ಕುಟುಂಬಸ್ಥರಿಗ ಆರ್ಥಿಕ ಸಹಾಯ ಮಾಡಿದರು. ಕುಮಾರಸ್ವಾಮಿಗೆ ವಿಧಾನಪರಿಷತ್ ಸದಸ್ಯರಾದ ಬಿ ಎಂ‌ ಫಾರೂಕ್ ಭೋಜೆಗೌಡ ಜೆಡಿಎಸ್ ಮುಖಂಡ ಎಂ.ಬಿ ಸದಾಶಿವ ಸಾಥ್  ನೀಡಿದರು. ಈ ವೇಳೆ ಪಾರದರ್ಶಕ ತನಿಖೆ ನಡೆಸುವಂತೆ ಒತ್ತಾಯಿಸುವ ಭರವಸೆ ನೀಡಿದರು.
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ ಮೃತರ ಕುಟುಂಬಕ್ಕೆ ಜೆಡಿಎಸ್ ನಿಂದ 5 ಲಕ್ಷ ಪರಿಹಾರ ವಿತರಿಸಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಗುರುವಾರ ನಡೆದ ಹಿಂಸಾಚಾರ, ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಸುಳ್ಳು ಹೇಳುತ್ತಿದ್ದಾರೆ. ಪೊಲೀಸ್ ಇಲಾಖೆಗೂ ಸರಿಯಾದ ಮಾಹಿತಿ ನೀಡಿಲ್ಲ ಎಂದರು.

ಇದೇ ವೇಳೆ ಸರ್ಕಾರದ ವಿರುದ್ದ ಕಿಡಿಕಾರಿದ ಹೆಚ್.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕನಿಷ್ಢ ಸೌಜನ್ಯವೂ ಇಲ್ಲ. ಶಾಸಕರಲ್ಲೂ ಹೃದಯ ವೈಶಾಲ್ಯತೆ ಇಲ್ಲ. ಗೋಲಿಬಾರ್‌ನಿಂದ ಎರಡೂ ಕುಟುಂಬಗಳು ಅನಾಥವಾಗಿವೆ. ಆಸ್ಪತ್ರೆಯಲ್ಲಿರುವ ಗಾಯಾಳುಗಳ ಕಷ್ಟ ಆಲಿಸಿದ್ದೀರಾ ಎಂದು  ಪ್ರಶ್ನಿಸಿದರು.

144 ಸೆಕ್ಷನ್ ಜಾರಿ ಮಾಡಲು ನಿರ್ದೇಶನ ಕೊಟ್ಟಿದ್ದು ಯಾರು..? ಎಂದು ಪ್ರಶ್ನಿಸಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಬೆಂಕಿಹಚ್ಚಿ ಗೃಹ ಸಚಿವರು ದೆಹಲಿಗೆ ಹೋಗಿದ್ದರು. ಗೃಹಸಚಿವರಾಗಲು ಬಸವರಾಜ ಬೊಮ್ಮಾಯಿ ಅನ್ ಫಿಟ್ ಎಂದು ಕಿಡಿಕಾರಿದರು.

Key words: mangalore-golibar-case-Former CM HD Kumaraswamy -action -against -officer