Sunday, September 20, 2026

BDA Apartments

ಮೈಸೂರಿನಲ್ಲಿ ಇಂದು ಮಂಗಳಮುಖಿಯರ ‘ತಲ್ಕಿ ನಾಟಕ’ ಉಚಿತ ಪ್ರದರ್ಶನ BDA JK_Adv BDA Adv
Home Front Page ಮೈಸೂರಿನಲ್ಲಿ ಇಂದು ಮಂಗಳಮುಖಿಯರ ‘ತಲ್ಕಿ ನಾಟಕ’ ಉಚಿತ ಪ್ರದರ್ಶನ.

ಮೈಸೂರಿನಲ್ಲಿ ಇಂದು ಮಂಗಳಮುಖಿಯರ ‘ತಲ್ಕಿ ನಾಟಕ’ ಉಚಿತ ಪ್ರದರ್ಶನ.

ಮೈಸೂರು,ಜುಲೈ,21,2023(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಇಂದು ಮಂಗಳಮುಖಿಯರೇ ರಚಿಸಿ ನಿರ್ದೇಶನ ಮಾಡಿರುವ ತಲ್ಕಿ ನಾಟಕ ಉಚಿತ ಪ್ರದರ್ಶನಗೊಳ್ಳಲಿದೆ.

ಮೈಸೂರಿನ ಮಂಗಳಮುಖಿ ಚಾಂದಿನಿ ಅಭಿನಯಿಸಿ, ಕತೆ ರಚನೆ ಮಾಡಿದ್ದು, ರಾಜ್ಯದ ವಿವಿಧ ಭಾಗಗಳನ್ನು 7 ಮಂದಿ ಮಂಗಳಮುಖಿಯರು ನಾಟಕದಲ್ಲಿ ಅಭಿನಯಿಸಲಿದ್ದಾರೆ. ನಗರದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಸಂಜೆ 6:30ಕ್ಕೆ ಪಯಣ ಎಂಬ ಮಂಗಳಮುಖಿಯರ ಸಂಸ್ಥೆಯಿಂದ ಈ ನಾಟಕ ಪ್ರದರ್ಶನವಾಗಲಿದ್ದು, ಮೈಸೂರಿನ ಜನತೆಗೆ ಉಚಿತವಾಗಿ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ.ಮೈಸೂರಿನಲ್ಲಿ ಇಂದು ಮಂಗಳಮುಖಿಯರ ‘ತಲ್ಕಿ ನಾಟಕ’ ಉಚಿತ ಪ್ರದರ್ಶನ mangalamuki

ತಲ್ಕಿ ಎಂದರೆ ಮಂಗಳಮುಖಿಯರ ಭಾಷೆಯಲ್ಲಿ ಅವರದೇ ಆದ ಒಂದು ಊಟದ ಪದ್ಧತಿ. ಮೈಸೂರಿನಲ್ಲಿ ಮಂಗಳಮುಖಿಯರ ಜೀವನಧಾರಿತ ಕುರಿತ ಮೊದಲ ನಾಟಕ ಇದಾಗಿದೆ. ಐವತ್ತು ವರ್ಷ ಮೇಲ್ಪಟ್ಟ ಮಂಗಳಮುಖಿಯ ಅಭಿನಯಿಸುತ್ತಿದ್ದು . ಆಧ್ಯಾತ್ಮಿಕ ಚಿಂತಕ ಶಂಕರ್ ದೇವನೂರ್ ನಾಟಕ ಉದ್ಘಾಟನೆ ಮಾಡಲಿದ್ದಾರೆ.

Key words: Mangalamukhi-‘Talki Natak-free -performance – Mysore- today