Monday, August 31, 2026

BDA Apartments

Home Front Page ನೆರೆ ವೇಳೆ ಮನೆ ಕಳೆದುಕೊಂಡವರ ಬಗ್ಗೆ  ಅದಷ್ಟು ಬೇಗ ಪಟ್ಟಿ ಮಾಡಿ: ಸಂಪುಟ ಸಭೆಯಲ್ಲಿ ಸಿಎಂ...

ನೆರೆ ವೇಳೆ ಮನೆ ಕಳೆದುಕೊಂಡವರ ಬಗ್ಗೆ  ಅದಷ್ಟು ಬೇಗ ಪಟ್ಟಿ ಮಾಡಿ: ಸಂಪುಟ ಸಭೆಯಲ್ಲಿ ಸಿಎಂ ಬಿಎಸ್ ವೈ ಸೂಚನೆ…

ಬೆಂಗಳೂರು,ಅಕ್ಟೋಬರ್,22,2020(www.justkannada.in)   ರಾಜ್ಯದ ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ಹಲವರು ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನೆರೆ ವೇಳೆ ಮನೆ ಕಳೆದುಕೊಂಡವರ ಬಗ್ಗೆ  ಅದಷ್ಟು ಬೇಗ ಪಟ್ಟಿ ಮಾಡಿ ಎಂದು  ಸಿಎಂ ಬಿಎಸ್  ಯಡಿಯೂರಪ್ಪ ಸಚಿವರಿಗೆ ಸೂಚನೆ ನೀಡಿದರು.jk-logo-justkannada-logo

ಇಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ನೆರೆಪೀಡಿತ ಪ್ರದೇಶಗಳಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಿ.  ನೆರೆ ವೇಳೆ ಮನೆ ಕಳೆದುಕೊಂಡವರ ಬಗ್ಗೆ  ಅದಷ್ಟು ಬೇಗ ಪಟ್ಟಿ ಮಾಡಿ. ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಸಚಿವರು ಹಾಗೂ ಶಾಸಕರಿಗೆ ಸೂಚನೆ ನೀಡಿದರು.make-list-lost-homes-cm-bs-yeddyurappa-cabinet-meeting

ಇನ್ನು ಸರ್ಕಾರದ ವಿರುದ್ಧ ಹಲವು ಟೀಕೆಗಳು ಬರುತ್ತಿವೆ. ಯಾರ ಬಾಯಿಗೂ ಆಹಾರವಾಗದಂತೆ ಕೆಲಸ ಮಾಡಿ. ಸ್ಥಳದಲ್ಲಿಯೇ ಇದ್ದು ಸಮಸ್ಯೆ ಬಗೆಹರಿಸಿ. ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಸಿಎಂ ಬಿಎಸ್ ವೈ ಸೂಚಿಸಿದರು.

Key words: Make – list -lost-homes-CM BS Yeddyurappa- cabinet meeting