ನಾನು ಲೋಕಾಯುಕ್ತ ಬಂದ್ ಮಾಡಿದ್ಧರೇ ಇವತ್ತೇ ರಾಜೀನಾಮೆ ನೀಡ್ತೇನೆ-ಬಿಜೆಪಿ ವಿರುದ್ದ ಸಿದ್ಧರಾಮಯ್ಯ ಗರಂ.

ಮೈಸೂರು,ಮಾರ್ಚ್,6,2023(www.justkannada.in):  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತ ಬಂದ್ ಮಾಡಿ ಎಸಿಬಿ ರಚಿಸಿ ತಮ್ಮ ಕೇಸ್ ಗಳನ್ನ ಮುಚ್ಚಿಹಾಕಿಕೊಂಡರು ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಗರಂ ಆದರು.

ಈ ಕುರಿತು ಮೈಸೂರಿನಲ್ಲಿ ಮಾತನಾಡಿ ತಿರುಗೇಟು ನೀಡಿದ ಸಿದ್ಧರಾಮಯ್ಯ, ನಾನು ಲೋಕಾಯುಕ್ತ ಮುಚ್ಚಿಲ್ಲ. ಲೋಕಾಯುಕ್ತ ಬಂದ್ ಮಾಡಿದ್ದರೇ ನಾನು ಇವತ್ತೇ ರಾಜೀನಾಮೆ ನೀಡುತ್ತೇನೆ. ನಾನು ಲೋಕಾಯಕ್ತದ ಯಾವ ಅಧಿಕಾರವನ್ನೂ ಕಿತ್ತುಕೊಂಡಿಲ್ಲ. ಎಲ್ಲಾ ಸತ್ಯ ಗೊತ್ತಿದ್ದರೂ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ. ಎಸಿಬಿ ರದ್ದು ಮಾಡ್ತೇವೆ  ಎಂದು ಬಜೆಪಿ ಪ್ರಣಾಳಿಕೆಯಲ್ಲಿತ್ತು. ಆದರೆ ಬಿಜೆಪಿ ಎಸಿಬಿಯನ್ನ ರದ್ದು ಮಾಡಿಲ್ಲ. ನ್ಯಾಯಾಲಯ ಎಸಿಬಿ ರದ್ದು ಮಾಡಿದೆ ಎಂದರು.

ಭ್ರಷ್ಟಾಚಾರ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ದಾಖಲೆ ಕೊಡಿ ಎಂದರು.  ದಾಖಲೆಗಳಿದ್ರೂ ದಾಖಲೆ ಕೊಡಿ ಅಂತಾ ಕೇಳಿದರು. ಶಾಸಕನ ಪುತ್ರ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇದು ಸ್ಟ್ರಾಂಗ್ ಎವಿಡೆನ್ಸ್ ಅಲ್ವಾ..?  ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: Lokayukta –not- bandh-Siddaramaiah – against- BJP.