ಹರಿಯಾಣದಲ್ಲಿ ಲಘು ಭೂಕಂಪ: ದಿಲ್ಲಿಯಲ್ಲೂ ಕಂಪಿಸಿದ ಭೂಮಿ

ಬೆಂಗಳೂರು, ಜನವರಿ 01, 2023 (www.justkannada.in): ಹರಿಯಾಣದಲ್ಲಿಇಂದು ಲಘು ಭೂಕಂಪ ಸಂಭವಿಸಿದೆ.

ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ 3.8 ದಾಖಲಾಗಿದೆ ಎಂದು ನ್ಯಾಶನಲ್‌ ಸೆಂಟರ್‌ ಫಾರ್‌ ಸಿಸ್ಮಾಲಜಿ ತಿಳಿಸಿದೆ.

ಇದರ ಜತೆಗೆ  ದಿಲ್ಲಿಯಲ್ಲೂ ಭೂಕಂಪಿಸಿದ ಅನುಭವ ಆಗಿದೆ. ಭೂಮಿಯಿಂದ 5 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ನ್ಯಾಶನಲ್‌ ಸೆಂಟರ್‌ ಫಾರ್‌ ಸಿಸ್ಮಾಲಜಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ 1.19 AM ಗೆ ಲಘಯು ಭೂಕಂಪ ಸಂಭವಿಸಿದೆ. ಹರಿಯಾಣದ ಜಾಜ್ಜರ್‌ ಎಂಬಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.