Friday, September 4, 2026

BDA Apartments

Home Front Page ರಾಜ್ಯದಲ್ಲಿ ಮೋಡಬಿತ್ತನೆಗೆ ಅಧಿಕೃತ ಚಾಲನೆ

ರಾಜ್ಯದಲ್ಲಿ ಮೋಡಬಿತ್ತನೆಗೆ ಅಧಿಕೃತ ಚಾಲನೆ

ಬೆಂಗಳೂರು,ಸೆಪ್ಟಂಬರ್ ,4,2026 (www.justkannada.in):  ರಾಜ್ಯದಲ್ಲಿ ತೀವ್ರ ಬರಗಾಲ ಹಿನ್ನೆಲೆಯಲ್ಲಿ ಮೋಡಬಿತ್ತನೆಗೆ ಅಧಿಕೃತ ಚಾಲನೆ  ದೊರೆಯಿತು.

ಇಂದು ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಮೋಡಬಿತ್ತನೆಗೆ ಅಧಿಕೃತ ಚಾಲನೆ ನೀಡಿದರು.

ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಬರಗಾಲದ ಸ್ಥಿತಿ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ  ಮೋಡಬಿತ್ತನೆ ನಡೆಸಲಾಗುತ್ತಿದೆ.  ಸರ್ಕಾರ ಇದಕ್ಕೆ 28 ಕೋಟಿ ರೂ. ಅನುದಾನವನ್ನು ನೀಡಿದೆ.  60 ದಿನಗಳ ಕಾಲ ಮೋಡಬಿತ್ತನೆ ಕಾರ್ಯ ನಡೆಯಲಿದೆ.

Key words: Official, launch , cloud seeding, state, Minister Chaluvarayaswamy