ಅದ್ಯಾರೋ ಸಚಿವರು ಸ್ವಾಮೀಜಿ ಅವರಿಗೆ ಸಿಡಿ ತೋರಿಸಲು ಹೋಗಿ ಉಗಿಸಿಕೊಂಡವ್ರೆ- ಹೊಸಬಾಂಬ್ ಸಿಡಿಸಿದ ಡಿ.ಕೆ. ಶಿವಕುಮಾರ್.

ದಾವಣಗೆರೆ,ಜೂನ್,4,2021(www.justkannada.in): ಅಧಿಕಾರಕ್ಕೋಸ್ಕರ ಅದ್ಯಾರೋ ಸಚಿವರು ಸ್ವಾಮೀಜಿಗೆ ತೋರಿಸಲು ಮೈಸೂರಿಗೆ ಸಿಡಿ ತಗೊಂಡು ಹೋಗಿದ್ರಂತೆ. ಸ್ವಾಮೀಜಿ ಆ ಸಚಿವರನ್ನು ಚೆನ್ನಾಗಿ ಬೈದು ಕಳಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಚಿವ ಸಿ.ಪಿ. ಯೋಗೇಶ್ವರ್ ಹೆಸರು ಪ್ರಸ್ತಾಪಿಸದೇ ಹೊಸ ಬಾಂಬ್ ಸಿಡಿಸಿದ್ದಾರೆ.jk

ನಗರದ ಬಾಪೂಜಿ ಎಂಬಿಎ ಹೆಲಿಪ್ಯಾಡ್‌ ನಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ  ಡಿಕೆ ಶಿವಕುಮಾರ್, ಸಿಡಿ ತೋರಿಸಲು ಮೈಸೂರಿಗೆ ಹೋಗಿದ್ದಂತಹ ಸಚಿವರಿಗೆ ಸ್ವಾಮೀಜಿ ಚೆನ್ನಾಗಿ ಬೈದು, ಉಗಿದು ಕಳಿಸಿದ್ದಾರೆ. ಸ್ವಾಮೀಜಿಗಳೊಬ್ಬರ ಬಳಿಗೆ ಸಿಡಿ ತಗೊಂಡು ಹೋಗಿದ್ದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಹೇಳುತ್ತಾರಲ್ಲಾ ಅದೇನೋ ಸಿ.ಡಿ ಇದೆ ಅಂತಾ. ಅದನ್ನೇ ಮೈಸೂರಿನಲ್ಲಿ ಸ್ವಾಮೀಜಿಗೆ ತೋರಿಸಲೆಂದು ಹೋಗಿದ್ರಂತೆ ಸಚಿವರು. ಹೂ ಅದೇ ಸಚಿವ ಯೋಗೇಶ್ವರ ಎಂದು ಅವರು ತಿಳಿಸಿದರು.

ಯಥಾ ರಾಜ, ತಥಾ ಅಧಿಕಾರಿಗಳು ಎಂಬಂತಹ ಸ್ಥಿತಿ ನಿರ್ಮಾಣ….

ಎಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ ಹೇಳಿ? ಎಲ್ಲಾ ಶಾಸಕರು ಏನು ಮಾಡುತ್ತಿದ್ದಾರೆ ಹೇಳಿ ನೋಡೋಣ. ಯಥಾ ರಾಜ, ತಥಾ ಪ್ರಜಾ ಎಂಬ ಮಾತಿದೆ. ಆದರೆ, ಯಥಾ ರಾಜ, ತಥಾ ಅಧಿಕಾರಿಗಳು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಸಚಿವರು, ಶಾಸಕರು ಹೇಗೆ ಕೆಲಸ ಮಾಡುತ್ತಾರೋ, ಅಧಿಕಾರಿಗಳೂ ಹಾಗೇ ಮಾಡುತ್ತಾರೆ ಎಂದು ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ಪಾಲಿಕೆ ಆಯುಕ್ತ ಶಿಲ್ಪ ನಾಗ್ ಜಗಳ  ಕುರಿತ ಪ್ರಶ್ನೆಗೆ  ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.

Key words: KPCC-president-DK shivakumar-CD-minister