ಈಗಲೂ ಕಾಲ ಮಿಂಚಿಲ್ಲ: ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಿದ್ರೆ ಗೆಲ್ಲಿಸುತ್ತೇವೆ- ಸಚಿವ ಕೆ.ಎಚ್ ಮುನಿಯಪ್ಪ.

ಬೆಂಗಳೂರು,ಮಾರ್ಚ್,29,2024 (www.justkannada.in): ಕೋಲಾರ ಟಿಕೆಟ್ ಕಗ್ಗಂಟು ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ಸಿಎಂ ಮಾಡುತ್ತಿರುವ  ನಿರ್ಧಾರ ರಿಸಲ್ಟ್ ಓರಿಯಂಟೇಡ್ ಅಲ್ಲ. ಈಗಲೂ ಕಾಲ ಮಿಂಚಿಲ್ಲ. ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಿದ್ರೆ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

ಈ ಕುರಿತು ಇಂದು ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಎಲ್ಲರೂ ಒಟ್ಟಿಗೆ ಇರಬೇಕು ಎಂಬುದು ನನ್ನ ಭಾವನೆ. ರಮೇಶ್ ಕುಮಾರ್ ಹಿರಿಯರು ನಿನ್ನೆ ಕೂಡ ಸಭೆಗೆ ಹಾಜರಿರಲಿಲ್ಲ.  ರಮೇಶ್ ಕುಮಾರ್ ಭೀನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡಲು ಹೇಳಿದ್ದಾರೆ.  ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ನೀಡಿದ್ರೆ ಗೆಲ್ಲುತ್ತೇವೆ. ಎಲ್ಲರೂ ಒಟ್ಟಾಗೆ ಇರಬೇಕು ಅನ್ನೋದು ನನ್ನ ಅಭಿಮತ ಎಂದರು.

ಎಲ್ಲಾ ಕಡೆ ಸಂಧಾನ ಆಗುತ್ತೆ ಕೋಲಾರದ್ದು ಏಕೆ ಸಂಧಾನ ಆಗುತ್ತಿಲ್ಲ. ಸಿಎಂ ಡಿಸಿಎಂಗೆ ಸಮಸ್ಯೆ ಬಗೆಹರಿಸಬೇಕಾದ ಜವಾಬ್ದಾರಿ ಇದೆ.  ಸಮಸ್ಯೆ ಬಗೆಹರಿಸಬೇಕಾದವರು ಸ್ವಲ್ಪ ಮನಸ್ಸು ಮಾಡಬೇಕು . ಮನಸ್ಸು ಮಾಡಿದ್ರೆ  ಬಗೆ ಹರಿಯುತ್ತೆ ಎಂದರು.

ನಾನು ಬಹಳ ನೋವಿನಲ್ಲಿದ್ದೇನೆ.  ಅದರೆ ನೋವು ದೊಡ್ಡದಲ್ಲ ಕಾಂಗ್ರೆಸ್ ಪಕ್ಷ ದೊಡ್ಡದು ಎಂದು ಮುನಿಯಪ್ಪ ಹೇಳಿದರು.

Key words: kolar, Minister ,KH Muniappa