ಕೋಲಾರ ‘ಕೈ’ ಟಿಕೆಟ್ ಕಗ್ಗಂಟು: ರಾಜೀನಾಮೆಗೆ ನಿರ್ಧರಿಸಿ ವಿಧಾನಸೌಧಕ್ಕೆ ಆಗಮಿಸಿದ ಸಚಿವ, ಶಾಸಕರು.

ಬೆಂಗಳೂರು,ಮಾರ್ಚ್,27,2024 (www.justkannada.in): ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿರುವ ಕಾಂಗ್ರೆಸ್ ಗೆ ಕೋಲಾರ ಟಿಕೆಟ್ ಕಗ್ಗಂಟಾಗಿದ್ದು ಭಿನ್ನಮತ ಸ್ಪೋಟಗೊಂಡಿದೆ.

ಸಚಿವ ಕೆಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಸಚಿವ ಎಂ.ಸಿ ಸುದಾಕರ್ , ಶಾಸಕರಾದ ಕೊತ್ತೂರು ಮಂಜುನಾಥ್, ಕೆವೈ ನಂಜೇಗೌಡ,  ಪರಿಷತ್ ಸದಸ್ಯ ಅನಿಲ್ ಕುಮಾರ,  ನಜೀರ್ ಅಹ್ಮದ್ ರಾಜೀನಾಮೆಗೆ ನಿರ್ಧರಿಸಿದ್ದು ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ  ಅನಿಲ್ ಕುಮಾರ್, ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಧು ಮನವಿ  ಮಾಡಿದ್ದವು. ಆದ್ರೆ ಮುನಿಯಪ್ಪ ಅಳಿಯ ಚಿಕ್ಕಪೆದ್ದಣಗೆ ಟಿಕೆಟ್ ಬಗ್ಗೆ ಮಾಹಿತಿ ಇದೆ. ಎಐಸಿಸಿ ಮೂಲಗಳಿಂದ ನಮಗೆ ಖಚಿತ ಮಾಹಿತಿ ಸಿಕ್ಕಿದೆ. ನ ಮಗೆ ಮನವಿಗೆ ಸ್ಪಂದಿಸದಿರುವುದರಿಂದ ರಾಜೀನಾಮೆ  ನೀಡಲು ನಿರ್ಧರಿಸಿದ್ದೇವೆ. ಕೋಲಾರ ಭಾಗದ ಶಾಸಕರು ಎಂಎಲ್  ಸಿಗಳು ರಾಜೀನಾಮೆ ನೀಡುತ್ತೇವೆ ಎಂದು ಹೇಳಿದ್ದಾರೆ.

Key words: Kolar, congress, ticket