ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಶಿಕ್ಷಕಿಯ ಕಿಡ್ನಾಪ್.

ಹಾಸನ,ನವೆಂಬರ್,30,2023(www.justkannada.in):  ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಶಿಕ್ಷಕಿಯನ್ನ ದುಷ್ಕರ್ಮಿಗಳು ಕಿಡ್ನಾಪ್ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಅರ್ಪಿತಾ ಕಿಡ್ನಾಪ್ ಆದ ಶಿಕ್ಷಕಿ. ರಾಮು ಎಂಬಾತನೇ ಕಿಡ್ನಾಪ್ ಮಾಡಿರುವ ಆರೋಪಿ. ಕಳೆದ 15 ದಿನಗಳ ಹಿಂದೆ ರಾಮು ಶಿಕ್ಷಕಿ ಅರ್ಪಿತಾ ಮನೆಗೆ ಬಂದು ಮದುವೆ ಮಾಡಿಕೊಳ್ಳುವಂತೆ ಕೇಳಿದ್ದಾನೆ. ಆದರೆ ಆಕೆಯ ಪೋಷಕರು ಮದುವೆಗೆ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಮನೆಯಿಂದ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿ ಅರ್ಪಿತಾರನ್ನ ರಾಮು ತನ್ನ ಸ್ನೇಹಿತರ  ಜೊತೆ ಸೇರಿ ಕಾರಿನಲ್ಲಿ ಅಪಹರಿಸಿದ್ದಾನೆ. ಈ ಕೃತ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಕಿ ಅರ್ಪಿಯಾ ತಾಯಿ, ನನ್ನ ಮಗಳನ್ನ ಮದುವೆ  ಮಾಡಿಕೊಡುವಂತೆ  ಕೇಳಿದ್ದರು. ಆದರೆ ನಾವು ಕೊಡಲ್ಲ ಎಂದಿದ್ದವು. ಈ ಹಿನ್ನೆಲೆಯಲ್ಲಿ ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನಾಸ್ಥಳಕ್ಕೆ ಸ್ಥಳಕ್ಕೆ ಹಾಸನ ಎಸ್ ಪಿ ಭೇಟಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Kidnapping – teacher – cinematic -hassan