ಹಾಸನದಲ್ಲಿ ಒಂದಲ್ಲ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು-ಜೆ.ಪಿ ನಡ್ಡಾ ಕರೆ

ಹಾಸನ,ಫೆಬ್ರವರಿ,21,2023(www.justkannada.in): ಹಾಸನದಲ್ಲಿ ಒಂದಲ್ಲ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ಹಾಸನದಲ್ಲಿ 100 ರಷ್ಟು ರಿಸಲ್ಟ್ ಬರಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕರೆ ನೀಡಿದರು.

ಹಾಸನದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಜೆ.ಪಿ ನಡ್ಡಾ, ಹೋಯ್ಸಳರ ಕಾಲದ ಶಿಲ್ಪಕಲೆ ಹಾಸನದಲ್ಲಿ ಪ್ರಸಿದ್ದಿಯಾಗಿದೆ.  ಪ್ರಧಾನಿ ಮೋದಿ ನೇತೃತ್ವದಲ್ಲಿ ದೊಡ್ಡ ಮಟ್ಟದ ಅಭಿವೃದ್ದಿಯಾಗುತ್ತಿದೆ. ಇಂದು ಚೆನ್ನಕೇಶವ ದೇವರ ದರ್ಶನ ಪಡೆಯುವ ಅವಕಾಶ ಸಿಕ್ಕಿದೆ.  ರಾಜ್ಯದಲ್ಲಿ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ.  ಸಿದ್ದರಾಮಯ್ಯ ಸರ್ಕಾರವಿದ್ದಾಗ ರಾಜ್ಯದಲ್ಲಿ ಪವರ್ ಕಟ್ ಆಗ್ತಿತ್ತು.  ಆದರೆ ನಮ್ಮ ಸರ್ಕಾರ ಎಲ್ಲಾ ಸಮಯದಲ್ಲಿ ಕರೆಂಟ್ ನೀಡುತ್ತಿದೆ. ಕೊರೋನಾ ಬಳಿಕ ಅಮೇರಿಕ, ಚೀನಾ ಪರಿಸ್ಥಿತಿ ಏನಾಗಿದೆ.  ಯುರೋಪ್ ಆರ್ಥಿಕ ಪರಿಸ್ಥಿತಿ ಜಗತ್ತಿಗೆ ಗೊತ್ತಿದೆ. ಕೋವಿಡ್ ಬಳಿಕವೂ ಭಾರತ ಆರ್ಥಿಕ ಪರಿಸ್ಥಿತಿ ಉತ್ತಮ ಸ್ಥಿತಿಯಲ್ಲಿದೆ ಎಂದು ಹೊಗಳಿದರು.

ಪಿಎಂ ಮೋದಿ ಲಾಕ್ ಡೌನ್ ಮಾಡಿ ದೇಶದ ಜನರನ್ನ ಉಳಿಸಿದರು. ಈಗಲೂ ಅಮೆರಿಕ ಅಧ್ಯಕ್ಷ ಮಾಸ್ಕ್ ಹಾಕಿ ಓಡಾಡುತ್ತಾರೆ. ಆದರೆ ಇಂದು ನಮ್ಮ ದೇಶದಲ್ಲಿ ಅಂತಹ ಸ್ಥಿತಿ ಇಲ್ಲ. ಅದಕ್ಕೆ ಕಾರಣ ದೇಶದಲ್ಲಿ ಶೇ.100  ರಷ್ಟು ವ್ಯಾಕ್ಸಿನೇಷನ್ ಆಗಿದೆ.  ಕಾಂಗ್ರೆಸ್ ನಾಯಕರಿಗೆ ಇದೆಲ್ಲ ಕಾಣುವುದಿಲ್ಲ. ಮೋದಿ ನೇತೃತ್ವದಲ್ಲಿ ಭಾರತ ಇಂದು ಕೊಡುವ ರಾಷ್ಟ್ರವಾಗಿದೆ. ಹಾಗಾಗಿ  ನಾವು ಬಿಜೆಪಿ ಕಾರ್ಯಕರ್ತರಾಗಿದ್ದಕ್ಕೆ ಹೆಮ್ಮೆ ಪಡಬೇಕು ಎಂದರು.

ಮೊಬೈಲ್ ಉತ್ಪಾದನೆಯಲ್ಲಿ ದೇಶ 2ನೇ ಸ್ಥಾನದಲ್ಲಿದೆ. ಈಗ ಆ್ಯಪಲ್ ಫೋನ್ ಕೂಡ ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತಿದೆ . ಆಟೋ ಮೊಬೈಲ್ ಕ್ಷೇತ್ರದಲ್ಲಿ ಜಪಾನ್ ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ ಎಂದು ಜೆಪಿ ನಡ್ಡಾ ತಿಳಿಸಿದರು.

Key words: JP Nadda – BJP – win  – seven constituencies – Hassan