Sunday, August 23, 2026

BDA Apartments

Home Front Page ಮಂಗಳೂರು ಸ್ಪೋಟದ ಹಿಂದೆ ಜಿಹಾದಿ ಷಡ್ಯಂತ್ರ: ಉಗ್ರರನ್ನ ಬೇರು ಸಮೇತ ಕಿತ್ತು ಹಾಕಬೇಕು- ಮಾಜಿ ಸಚಿವ...

ಮಂಗಳೂರು ಸ್ಪೋಟದ ಹಿಂದೆ ಜಿಹಾದಿ ಷಡ್ಯಂತ್ರ: ಉಗ್ರರನ್ನ ಬೇರು ಸಮೇತ ಕಿತ್ತು ಹಾಕಬೇಕು- ಮಾಜಿ ಸಚಿವ ಸಿ.ಟಿ ರವಿ.

ನವದೆಹಲಿ,ನವೆಂಬರ್,24,2022(www.justkannada.in): ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟದ ಹಿಂದೆ ಜಿಹಾದಿ ಷಡ್ಯಂತ್ರವಿದೆ. ಜಿಹಾದಿ ಮಾನಸಿಕತೆಯೇ ಸ್ಪೋಟಕ್ಕೆ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಈ ಕುರಿತು ಇಂದು ಮಾತನಾಡಿದ ಶಾಸಕ ಸಿ.ಟಿ ರವಿ, ಮಂಗಳೂರು ಆಟೋದಲ್ಲಿ ಬಾಂಬ್ ಸ್ಪೋಟ ಸಂಬಂಧ. ದೇವರು ನಮ್ಮ ಕಡೆ ಇದ್ದಾರೆ. ದೀನ್ ದಾರ್ ಅಂಜುಮಾನ ಅಂದು ಕೃತ್ಯವೆಸಗಿತ್ತು.  ಅಂದು ಮಲ್ಲಿಕಾರ್ಜುನ ಖರ್ಗೆ  ಆರ್ ಎಸ್ ಎಸ್  ಮೇಲೆ ಆರೋಪ ಹೊರಸಿದ್ದರು. ಹಿಂದುಗಳ ತಲೆಗೆ ಕಟ್ಟಿದ್ದರು.BL Santosh - selection -candidates - Rajya Sabha-minister-CT Ravi.

ಬಿಜೆಪಿ ಬಂದ ಮೇಲೆ ಉಗ್ರ ಚಟುವಟಿಕೆಗೆ ಕಡಿವಾಣ ಬಿದ್ದಿದೆ. ಸೆಮಿ ಬಳಿಕ ಪಿಎಫ್ ಐ ನಿಷೇಧಿಸಿದ್ದೇವೆ.  ಉಗ್ರರನ್ನ ಬೇರು ಸಮೇತ ಕಿತ್ತು ಹಾಕಬೇಕು ಎಂದು ಸಿಟಿ ರವಿ ಹೇಳಿದರು.

Key words: Jihadi -conspiracy – Mangalore blast-CT Ravi