ಜೆಡಿಎಸ್ ನಲ್ಲಿ ಬೇರೆಯವರು ಅಧ್ಯಕ್ಷರಾದ್ರೂ ಹೆಚ್.ಡಿ ಕುಮಾರಸ್ವಾಮಿಯೇ ಅಧ್ಯಕ್ಷರು- ಸಚಿವ ಚಲುವರಾಯಸ್ವಾಮಿ ವ್ಯಂಗ್ಯ.

ಬೆಂಗಳೂರು,ಅಕ್ಟೋಬರ್,19,2023(www.justkannada.in):  ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಉಚ್ಚಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಜೆಡಿಎಸ್ ನಲ್ಲಿ ಬೇರೆಯವರು ಅಧ್ಯಕ್ಷರಾದರೂ, ಕುಮಾರಸ್ವಾಮಿಯವರೇ ಅಧ್ಯಕ್ಷರು. ‘ಅದರಲ್ಲಿ ವಿಶೇಷವೇನಿಲ್ಲ. ಜೆಡಿಎಸ್ ನಲ್ಲಿ ಯಾರೇ ಅಧ್ಯಕ್ಷರಾದರೂ  ಹೆಚ್.ಡಿಕೆಯೇ ಅಧ್ಯಕ್ಷರು ಎಂದು ಲೇವಡಿ ಮಾಡಿದರು.

ಅನುಭವ ಇದ್ದೂ ಸಿಎಂ ಇಬ್ರಾಹಿಂ ಅಲ್ಲಿಗೆ ಹೋಗಿದ್ದರು. ಅವರು ಇಲ್ಲೇ ಇದ್ದಿದ್ರೆ ಗೌರವ ಇರುತ್ತಿತ್ತು  ಎಂದು ಚಲುವರಾಯಸ್ವಾಮಿ ನುಡಿದರು.

Key words: JDS-president -HD Kumaraswamy – Minister –Chaluvarayaswamy